ADVERTISEMENT

ಸಂಕಟ ತಂದ ರಾಗಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST

ಕಳೆದ ಕೆಲವು ತಿಂಗಳುಗಳಿಂದ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯ ಪಡಿತರದಾರರಿಗೆ ಉಚಿತ ಗೋಧಿಯ ಬದಲು ರಾಗಿ ವಿತರಣೆ ಮಾಡಲಾಗುತ್ತಿದೆ. ಬಡವರಿಗೆ  ಇದು ಸಂತೋಷ ತರುವ ಬದಲು ಸಂಕಟ ತಂದಿದೆ. ಏಕೆಂದರೆ ಈ ರಾಗಿ ಕಲ್ಲು, ಮಣ್ಣು, ದೂಳಿನಿಂದ ಕೂಡಿದೆ.  ಇದನ್ನು ನೋಡಿದರೆ ಸರ್ಕಾರಕ್ಕೆ ಕಣ್ಣಿಲ್ಲ ಎಂಬುದು ಸಾಬೀತಾದಂತಾಗಿದೆ ಎಂದು ಜನ ದೂರುತ್ತಿದ್ದಾರೆ.

ಉಚಿತವಾಗಿ ನೀಡಿದ ಮಾತ್ರಕ್ಕೆ ಅದು ಬಳಕೆಗೆ ಯೋಗ್ಯವೋ ಅಲ್ಲವೋ ಎಂದು ಪರೀಕ್ಷಿಸದೆ ವಿತರಿಸುವುದು ಯಾವ ನ್ಯಾಯ? ಇನ್ನು ಮುಂದಾದರೂ ಬಳಕೆ ಯೋಗ್ಯ ರಾಗಿ ವಿತರಿಸಲು ಸರ್ಕಾರ ಮುಂದಾಗಬೇಕು.
-ಶಿವಮೂರ್ತಿ, ಪಾಂಡೋಮಟ್ಟಿ, ಚನ್ನಗಿರಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.