ADVERTISEMENT

ಸಚಿವರ ಆದರ್ಶ

ಆರ್‌.ಎಸ್‌.ಚಾಪಗಾವಿ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST

ಮಂತ್ರಿಗಳಿಗೆ ಸಿಗುವ ವೇತನ, ಮನೆ ಬಾಡಿಗೆ, ರೈಲು ಪ್ರಯಾಣ ಭತ್ಯೆಯನ್ನು ಸರ್ಕಾರಕ್ಕೆ ಬಿಟ್ಟು ಕೊಡುವುದಾಗಿ ಹೇಳಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉನ್ನತ ಆದರ್ಶ ಮೆರೆದಿದ್ದಾರೆ.

ಸುಳ್ಳಿನ ದುಬಾರಿ ಬಿಲ್ಲು ಸಲ್ಲಿಸಿ ಹಣ ಹೊಡೆಯುವ, ಬೆಂಗಳೂರಿನಲ್ಲೇ ಇದ್ದುಕೊಂಡು ದೂರದ ಊರುಗಳಲ್ಲಿ ತಮ್ಮ ವಿಳಾಸ ತೋರಿಸಿ ಲಕ್ಷಗಟ್ಟಲೆ ಖೊಟ್ಟಿ ಪ್ರಯಾಣ ಭತ್ಯೆ ಗಿಟ್ಟಿಸುವ ರಾಜಕಾರಣಿಗಳೇ ಎಲ್ಲೆಡೆ ತುಂಬಿರುವಾಗ, ಸಚಿವ ರಾಯರೆಡ್ಡಿ ಎಲ್ಲರಿಗೆ ಮೇಲ್ಪಂಕ್ತಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.