ಗಾಂಧಿ ಜಯಂತಿಯಂದು
ನಿಯಂತ್ರಿಸಲು ಹೊರಟವರು
ಕಸದ ಹಾವಳಿ,
ಹೇಗೆ ಆಚರಿಸಿದರೋ
ಈಗ ದೀಪಾವಳಿ!?
ಅಂದು
ಬೀದಿ ಗುಡಿಸಿ ಬೀಗಿ,
ಇಂದು ಪಟಾಕಿ ಸಿಡಿಸಿ ಕೂಗಿ
ಸಂಭ್ರಮಿಸಿದರೆ
ಏನು ಪ್ರಯೋಜನ?
ಬೆಳಕಷ್ಟೇ ಹೊಮ್ಮಲಿ,
ಪಟಾಕಿಯ ಸದ್ದಡಗಲಿ.
ಇಲ್ಲವಾದರೆ,
ಮೆಚ್ಚಲಾರರು ಜನ
ಒಪ್ಪೀತೇ ನಿಮ್ಮದೇ ಮನ!?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.