ADVERTISEMENT

ಹೆಮ್ಮೆಯ ಪ್ರತೀಕ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST

ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿರುವುದು ಹೆಮ್ಮೆಯ ಸಂಗತಿ. ಇವರಲ್ಲಿ ಕಡುಬಡವರ ಮಕ್ಕಳು,  ಎಷ್ಟೋ ಕಿ.ಮೀ. ನಡೆದು ಶಾಲೆಗೆ ಹೋಗುತ್ತಿದ್ದವರು, ಮನೆಪಾಠ ಅಥವಾ  ವಿಶೇಷ ತರಗತಿಯಂತಹ ವ್ಯವಸ್ಥೆ ಇಲ್ಲದವರು ಸಹ ಅತ್ಯುತ್ತಮ ಅಂಕ ಗಳಿಸಿ ಮಾದರಿಯಾಗಿದ್ದಾರೆ. ಈಗಿನ ‘ಹೈ-ಟೆಕ್’ ಯುಗದಲ್ಲಿ ಈ ವಿದ್ಯಾರ್ಥಿಗಳ ಸಾಧನೆ ಅನುಕರಣೀಯ. ಇನ್ನಾದರೂ ಸರ್ಕಾರ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಧುನಿಕ ಸಲಕರ ಣೆಗಳು, ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶೇಷ ತರಗತಿ ಯಂತಹ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು.
- ಪ್ರಸನ್ನ ಎಚ್‌. ಹೊಸೂರಕರ್,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.