ADVERTISEMENT

ಹಂಪಿ ಉತ್ಸವ ರೂವಾರಿ: ಇವರಿಗೂ ಪಾಲಿದೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 19:30 IST
Last Updated 23 ಆಗಸ್ಟ್ 2018, 19:30 IST

‘ಹಂಪಿ ಉತ್ಸವ ರೂವಾರಿ’ (ವಾ.ವಾ., ಆ. 23) ಪತ್ರದಲ್ಲಿ ‘ಹಂಪಿ ಉತ್ಸವದ ರೂವಾರಿ ದಿವಂಗತ ಎಂ.ಪಿ. ಪ್ರಕಾಶ್‌’ ಎಂದು ಹೇಳಿದ್ದಾರೆ. ಅದು ನಿಜ. ಸಾಂಸ್ಕೃತಿಕ ಕಳಕಳಿಯ ರಾಜಕಾರಣಿಯಾಗಿದ್ದ ಪ್ರಕಾಶ್‌ ಅವರ ಕಲಾಸೇವೆ ಅನನ್ಯ.

ಇದರೊಟ್ಟಿಗೆ ಅಂದು ಅಧಿಕಾರಿಯಾಗಿದ್ದ ವೈ.ಕೆ. ಮುದ್ದುಕೃಷ್ಣ ಅವರ ದೂರದರ್ಶಿತ್ವ, ಹಂಪಿ ಉತ್ಸವದ ಮೊದಲ ಸಂಯೋಜಕರಾಗಿ ದುಡಿದ ರಂಗನಿರ್ದೇಶಕ ಆರ್‌. ನಾಗೇಶ್‌ ಅವರೂ ಸಮಪಾಲನ್ನು ಪಡೆಯಬಲ್ಲ ಸಾಧಕರು ಎಂಬುದೂ ಗಮನಾರ್ಹ.

ಆರ್‌. ವೆಂಕಟರಾಜು, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.