ADVERTISEMENT

ಭಕ್ತಿ ಪರಂಪರೆಗೆ ಅವಮಾನ

ಹುರುಕಡ್ಲಿ ಶಿವಕುಮಾರ
Published 31 ಮಾರ್ಚ್ 2019, 20:00 IST
Last Updated 31 ಮಾರ್ಚ್ 2019, 20:00 IST

‘ಅಡ್ಡಪಲ್ಲಕ್ಕಿ ಉತ್ಸವ ಬೇಕಿಲ್ಲ’ ಎಂದಿದ್ದಾರೆ ಕಾಶಿಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ.ಮಾನವ ಘನತೆಯನ್ನು ಎತ್ತಿ ಹಿಡಿಯುವ ಯಾರೂ ಅಡ್ಡಪಲ್ಲಕ್ಕಿ ಉತ್ಸವವನ್ನು ಒಪ್ಪಲಾಗದು. ಇದು, ಭಕ್ತಿಪರಂಪರೆಗೇ ಅವಮಾನ.

ವೈಚಾರಿಕ–ವೈಜ್ಞಾನಿಕ ಬೆಳವಣಿಗೆಯನ್ನು ಸಹಿಸದೆ, ಮೂಢನಂಬಿಕೆಯನ್ನೇಬಿತ್ತಿ ಬೆಳೆಯುವಕೆಲವೇ ಕೆಲವರು ಅಡ್ಡಪಲ್ಲಕ್ಕಿಯನ್ನು ಸಮಾಜದ ಮೇಲೆ ಹೇರುತ್ತಿದ್ದಾರೆ. ಆ ಮೂಲಕ, ಮಾನವಘನತೆಯನ್ನು ಎತ್ತಿ ಹಿಡಿದ ಶರಣ ಸಂಸ್ಕೃತಿಗೆ ದ್ರೋಹ ಬಗೆಯುತ್ತಿದ್ದಾರೆ.

ಇದರಿಂದಾಗಿ ಭಕ್ತಿಗೆ ಅಸಮಾನತೆಯವೇಷ ತೊಡಿಸಿ, ಪಾಳೆಗಾರಿಕೆ ಸಂಸ್ಕೃತಿಗೆ ನೀರೆರೆದಂತಾಗುತ್ತಿದೆ. ಆದ್ದರಿಂದ ಕಾಶಿಪೀಠದ ಶ್ರೀಗಳಮಾರ್ಗವನ್ನೇ ಬೇರೆ ಸ್ವಾಮಿಗಳೂ ಅನುಸರಿಸಬೇಕು.

ADVERTISEMENT

- ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.