ಉಡುಪಿ: ಭಾರತದ ಆಟಗಾರರಾದ ಕಿಶನ್ ಗಂಗೂಲಿ, ಅಶ್ವಿನ್ ಕೆ. ಮಕ್ವಾನ, ಯದುಜೀತ್ ಡೇ ಹಾಗೂ ಬಾಂಗ್ಲಾದೇಶದ ಫಿಡೆ ಅಗ್ರ ಶ್ರೇಯಾಂಕಿತ ಆಟಗಾರ ಹುಸೇನ್ ಎಜಾಜ್ ಅವರು ಅಂಧರ ಏಷ್ಯನ್ ಚಾಂಪಿಯನ್ಷಿಪ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಆಡಿದ ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿದರು.
ಮಣಿಪಾಲ್ ವಿಶ್ವವಿದ್ಯಾಲಯ, ಅಖಿಲ ಭಾರತ ಅಂಧರ ಚೆಸ್ ಒಕ್ಕೂಟ, ಅಂತರರಾಷ್ಟ್ರೀಯ ಅಂಧರ ಚೆಸ್ ಸಂಘಟನೆ ಮತ್ತು ಅಖಿಲ ಭಾರತ ಚೆಸ್ ಒಕ್ಕೂಟ ಆಯೋಜಿಸಿರುವ ಈ ಕೂಟದ ಎರಡನೇ ಸುತ್ತಿನ ಮುಕ್ತಾಯದ ಹಂತದಲ್ಲಿ ಎಜಾಜ್ ಅವರು ಜಾಗ ರೂಕತೆ ಯಿಂದ ಆಡಿ ಸ್ವಪ್ನಿಲ್ ಶಾ ಎದುರು ಗೆದ್ದರು. ಸೌಂದರ್ಯ ಕುಮಾರ್ ಪ್ರದಾನ್ ಅವರ ವಿರುದ್ಧ ಕಿಶನ್ ಗೆದ್ದರೆ, ಅಶ್ವಿನ್ ಮಕ್ವಾನ ಅವರು ಪಾಟೀಲ್ ಶಿರಿಷ್ ವಿರುದ್ಧ ಜಯ ಗಳಿಸಿದರು. ಯದುಜೀತ್ ಅವರು ಶ್ರೀಲಂಕಾದ ತೌನ್ ರಶ್ದಿ ಅವರನ್ನು ಮಣಿಸಿದರು.
ಆರ್ಯನ್ ಬಿ ಜೋಶಿ ಅವರು ಕೃಷ್ಣ ಉಡುಪ ಅವರೊಂದಿಗೆ ನಡೆದ ಪಂದ್ಯದಲ್ಲಿ ಡ್ರಾ ಮಾಡಿಕೊಂಡರು. ಬಾಂಗ್ಲಾ ದೇಶದ ಸರ್ಕಾರ ಬಪ್ಪಿ ಅವರು ಭಾರತದ ಸಮಂತ್ ಮಿಲಿಂದ್ ಅವರ ವಿರುದ್ಧ, ಫಿಲಿಪಿನ್ಸ್ನ ರೊಡೊಲ್ಫೊ ಸರ್ಮೇಯಿನ್ ಭಾರತದ ವೈಶಾಲಿ ನರೇಂದ್ರ ಸಾಲ್ವಂಕರ್ ವಿರುದ್ಧ ಡ್ರಾ ಮಾಡಿಕೊಂಡರು.
ಭಾರತದ ವಾಗ್ಮರೆ ಸಚಿನ್ ಲಾಹು ಅವರು ಭಾರತದ ಮೃಣಾಲಿನಿ ಪಾಂಡೆ ಅವರನ್ನು ಮಣಿಸಿದರು. ಫಿಲಿಪ್ಪೀನ್ಸ್ನ ಜೋಸ್ ಎಂ ಮಾರ್ಗ್ಯೂನಾಟ್ ಅವರ ನ್ನು ಭಾರತದ ಪ್ರಚೂರ್ಯ ಕುಮಾರ್ ಪ್ರದಾನ್, ಭಾರ ತದ ಕೆ. ಮಾರಿಮುತ್ತು ಅವರು ಶ್ರೀಲಂ ಕಾದ ಹಿರಯಮುಲ್ಲಾ ವಿತಂಗೆ ಸಂಜೀವ ಕರುಣರತ್ನ ಅವರನ್ನು ಮಣಿಸಿದರು. ಭಾರತದ ಸೋಮೇಂದರ್ ಶ್ರೀಲಂಕಾದ ಲಿಯಾನ ಅರಚಿಲ್ಲಗೆ ಉಪುಲ್ ಇಂದ್ರಜಿತ್ ಅವರನ್ನು ಸೋಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.