ADVERTISEMENT

ಎನ್‌ಸಿಎಯಲ್ಲಿ ಯುವರಾಜ್ ಸಿಂಗ್‌ ತರಬೇತಿಗೆ ಅಪಸ್ವರ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಎನ್‌ಸಿಎಯಲ್ಲಿ ಯುವರಾಜ್ ಸಿಂಗ್‌ ತರಬೇತಿಗೆ ಅಪಸ್ವರ
ಎನ್‌ಸಿಎಯಲ್ಲಿ ಯುವರಾಜ್ ಸಿಂಗ್‌ ತರಬೇತಿಗೆ ಅಪಸ್ವರ   

ನಾಗ್ಪುರ: ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ತರಬೇತಿಗೆ ಹಾಜರಾಗಿರುವುದು ಬಿಸಿಸಿಐನಲ್ಲಿ ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ.

ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಗಳಲ್ಲಿ ಉತ್ತಮ ಆಟವಾಡುವಲ್ಲಿ ವಿಫಲರಾದ ಯುವರಾಜ್‌ ಸಿಂಗ್‌ ಫಿಟ್‌ನೆಸ್ ತರಬೇತಿ ಪಡೆಯಲು ನಿರ್ಧರಿಸಿದ್ದರು. ಆದರೆ ಗಾಯದ ಸಮಸ್ಯೆ ಅಥವಾ ದೈಹಿಕ ತೊಂದರೆ ಕಾಣಿಸಿಕೊಳ್ಳದೇ ಇರುವಾಗ ಎನ್‌ಸಿಎದಲ್ಲಿ ತರಬೇತಿ ಪಡೆಯುವ ಅಗತ್ಯ ಏನಿದೆ ಎಂದು ಬಿಸಿಸಿಐ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಪಂಜಾಬ್‌ ಆಡಿದ ಒಟ್ಟು ಐದು ಪಂದ್ಯಗಳ ಪೈಕಿ ಯುವರಾಜ್ ಒಂದು ಪಂದ್ಯದಲ್ಲಿ  ಆಡಿದ್ದರು. ವಿದರ್ಭ ವಿರುದ್ಧದ ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 20 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 42 ರನ್ ಗಳಿಸಿದ್ದರು. ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿರುವ ಅವರು ಐಪಿಎಲ್ ಹರಾಜಿನಲ್ಲೂ ಹೆಚ್ಚು ಮೊತ್ತ ಗಳಿಸುವ ವಿಶ್ವಾಸದಲ್ಲಿದ್ದಾರೆ.

ADVERTISEMENT

ಬಿಸಿಸಿಐ ಆಯ್ಕೆ ಸಮಿತಿ ರಣಜಿ ಪಂದ್ಯಗಳ ಮೇಲೆ ಕಣ್ಣಿಟ್ಟಿದ್ದು ಯುವರಾಜ್ ಸಿಂಗ್‌ ಅವರಿಗೆ ತರಬೇತಿ ಅಗತ್ಯವಿದೆ ಎಂದು ಪಂಜಾಬ್‌ ತಂಡದವರಿಗೆ ಹೇಳಿದೆ. ಹೀಗಾಗಿ ಅವರು ತರಬೇತಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.