ADVERTISEMENT

ಕ್ರಿಕೆಟ್‌– ಭಯೋತ್ಪಾದನೆ ಎರಡು ಒಟ್ಟಿಗೆ ಸಾಗಲು ಅಸಾಧ್ಯ: ವಿಜಯ್ ಗೋಯಲ್‌

ಏಜೆನ್ಸೀಸ್
Published 29 ಮೇ 2017, 9:36 IST
Last Updated 29 ಮೇ 2017, 9:36 IST
ಕ್ರಿಕೆಟ್‌– ಭಯೋತ್ಪಾದನೆ ಎರಡು ಒಟ್ಟಿಗೆ ಸಾಗಲು ಅಸಾಧ್ಯ: ವಿಜಯ್ ಗೋಯಲ್‌
ಕ್ರಿಕೆಟ್‌– ಭಯೋತ್ಪಾದನೆ ಎರಡು ಒಟ್ಟಿಗೆ ಸಾಗಲು ಅಸಾಧ್ಯ: ವಿಜಯ್ ಗೋಯಲ್‌   

ನವದೆಹಲಿ: ಭಾರತ–ಪಾಕಿಸ್ತಾನ ನಡುವಣ ಕ್ರಿಕೆಟ್‌ ದ್ವಿಪಕ್ಷೀಯ ಸಂಬಂಧ ಕುರಿತು ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ಪ್ರಸ್ತಾಪಿಸಿದ್ದಾರೆ.
‘ಇಂಡೋ– ಪಾಕ್‌ ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಪಾಕ್‌ ಜತೆ ಕ್ರಿಕೆಟ್‌ ಪಂದ್ಯ ನಡೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.

'ಭಾರತ–ಪಾಕ್‌ ನಡುವೆ ಯಾವುದೇ ಸರಣಿಯ ಬಗ್ಗೆ ಪ್ರಸ್ತಾವನೆಗೂ ಮುನ್ನ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇಂದ್ರ ಸರ್ಕಾರದದೊಂದಿಗೆ ಚರ್ಚಿಸಬೇಕು' ಎಂದು ಹೇಳಿದ್ದಾರೆ.

ಕ್ರಿಕೆಟ್‌ ಹಾಗೂ ಭಯೋತ್ಪಾದನೆಗಳು ಎರಡು ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಗಡಿಯಲ್ಲಿ ಪಾಕ್‌ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತದ್ದು, ಇಂತಹ ಪರಿಸ್ಥಿತಿಯಲ್ಲಿ ದ್ವಿಪಕ್ಷೀಯ ಸರಣಿಗಳನ್ನು ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಜೂನ್‌ 1 ರಿಂದ ಚಾಂಪಿಯನ್ಸ್‌ ಟ್ರೋಫಿ ಆರಂಭವಾಗಲಿದೆ. ಜೂನ್‌ 4ರಂದು ಭಾರತ–ಪಾಕ್‌ ತಂಡಗಳು ಮುಖಾಮುಖಿಯಾಗಲಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.