ಲಂಡನ್: ಉತ್ತಮ ಆಟವಾಡುತ್ತಿದ್ದ ಪಾಂಡ್ಯ ರನ್ಔಟ್ ಆಗಲು ಜಡೇಜ ಕಾರಣ. ಕುಪಿತಗೊಂಡಿರುವ ಪಾಂಡ್ಯ ಡ್ರೆಸ್ಸಿಂಗ್ ರೂಂನಲ್ಲಿ ಜಡೇಜ ಅವರಿಗಾಗಿ ಹೇಗೆಲ್ಲ ಕಾದುಕುಳಿತಿರಬಹುದು ಎನ್ನುವ ಟ್ರೋಲ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಚಾಂಪಿಯನ್ಸ್ ಟ್ರೋಫಿ ಅಂತಿಮ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಸಂವಹನ ಕೊರೆತೆಯಿಂದ ರನ್ ಔಟ್ ಆದರು. ಜತೆಯಾಟಗಾರ ರವೀಂದ್ರ ಜಡೇಜಾ ಕ್ರೀಸ್ ಬಿಟ್ಟು ಓಡದೆ ನಿಂತಿದ್ದರಿಂದ ಪಾಂಡ್ಯ ಅಸಹನೆಯಿಂದ ಕೂಗುತ್ತ ಮೈದಾನದಿಂದ ಹೊರನಡೆದರು.
ಪಂದ್ಯದ ಬಳಿಕ ಪಾಂಡ್ಯ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅದನ್ನು ಅಳಿಸಿ ಹಾಕಿದ್ದಾರೆ. ಬೇಸರ ವ್ಯಕ್ತಪಡಿಸುವಂತಿದ್ದ ಟ್ವೀಟ್ ಅನ್ನು ಬಹಳಷ್ಟು ಕ್ರಿಕೆಟ್ ಅಭಿಮಾನಿಗಳು ಅದಾಗಲೇ ಮರುಟ್ವೀಟಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.