ADVERTISEMENT

ಟಿ.ಟಿ: ಕ್ವಾರ್ಟರ್‌ಗೆ ಶ್ರೇಯಸ್

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ; ಖುಷಿಗೆ ಜಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಶ್ರೇಯಸ್‌ ಕುಲಕರ್ಣಿ
ಶ್ರೇಯಸ್‌ ಕುಲಕರ್ಣಿ   

ಬೆಂಗಳೂರು: ಶ್ರೇಯಸ್ ಕುಲಕರ್ಣಿ ಇಲ್ಲಿ ನಡೆದ ಎರಡನೇ ಆರ್‌.ಎಸ್‌ ಶಕುಂತಲಾ ಸ್ಮಾರಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಗುರುವಾರ ನಡೆದ ಯೂತ್ ಬಾಲಕರ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶ್ರೇಯಸ್‌ 4–11, 11–6, 8–11, 11–6, 11–4ರಲ್ಲಿ ವಿಷ್ಣು ಭಟ್ ಅವರನ್ನು ಮಣಿಸಿದರು.

ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಬಿ. ರಕ್ಷಿತ್‌ 11–4, 11–6, 11–8ರಲ್ಲಿ ಅರ್ಜುನ್ ಸಧ್ವಾನಿ ವಿರುದ್ಧವೂ, ಎಸ್‌.ಕೃಷ್ಣಾ 10–12, 9–11, 11–5, 11–6, 13–11ರಲ್ಲಿ ಪ್ರತೀಕ್‌ ಗೋಡ್ಸೆ ಮೇಲೂ, ನೀರಜ್ ರಾಜ್‌ 11–5, 8–11, 11–8, 9–11, 11–4ರಲ್ಲಿ ಸುದರ್ಶನ್ ಎದುರೂ, ಸಮರ್ಥ್‌ ಕುರಡಿಕೇರಿ 11–9, 11–7, 6–11, 11–13, 11–6ರಲ್ಲಿ ನಿಖಿಲ್ ನಂದಾ ಮೇಲೂ, ಜಿ.ಎಸ್‌. ಸಂಕೇತ್‌ 11–8, 1–11, 8–11, 8–11, 11–6, 11–6ರಲ್ಲಿ ಶಿವಾಶಿಶ್‌ ಬೋರಾ ವಿರುದ್ಧವೂ, ಕೌಸ್ತುಭ ಕುಲಕರ್ಣಿ 11–8, 3–11, 11–5, 11–8ರಲ್ಲಿ ಸುಚೇತ್‌ ಶೆಣೈ ಎದುರೂ, ರೋಹನ್ ಜಮದಗ್ನಿ 13–11, 12–10, 11–8ರಲ್ಲಿ ವಿವೇಕಾನಂದ ಮೇಲೂ ಗೆಲುವು ದಾಖಲಿಸಿದ್ದಾರೆ.

ADVERTISEMENT

ಯೂತ್ ಬಾಲಕಿಯರ ಪಂದ್ಯಗಳಲ್ಲಿ ಸೇಜಲ್ ಕೌಶಿಕ್‌ 13–11, 5–11, 11–6, 11–7ರಲ್ಲಿ ಸುಷ್ಮಿತಾ ಬಿದ್ರಿ ವಿರುದ್ಧವೂ, ಜಿ.ಯಶಸ್ವಿನಿ 11–7, 11–8, 10–12, 12–10ರಲ್ಲಿ ಜಿ.ಕರುಣಾ ಮೇಲೂ, ಆದಿತಿ ಜೋಶಿ 11–1, 11–6, 11–4ರಲ್ಲಿ ಸ್ಪಟಿಕಾ ವಿರುದ್ಧವೂ, ಡಿ.ಕಲ್ಯಾಣಿ 11–6, 11–3, 11–2ರಲ್ಲಿ ವೈಷ್ಣವಿ ವಿರುದ್ಧವೂ, ಎ. ಸಂಯುಕ್ತಾ 11–4, 11–4, 11–6ರಲ್ಲಿ ಅನರ್ಘ್ಯ ಮಂಜುನಾಥ್ ಮೇಲೂ, ವಿ. ಖುಷಿ 11–4, 11–5, 11–6ರಲ್ಲಿ ದೀಪ್ತಿ ಎದುರೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.