ದಾವಣಗೆರೆ: ನಗರದ ಕ್ರೀಡಾ ವಸತಿ ನಿಲಯದ ಇಬ್ಬರು ಕುಸ್ತಿಪಟುಗಳು ಪಟ್ನಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ (20 ವರ್ಷದೊಳಗಿನವರ) ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಮೊದಲ ದಿನವಾದ ಶನಿವಾರ ಬಾಹುಬಲಿ ಶಿರಹಟ್ಟಿ 66 ಕೆ.ಜಿ. ಗ್ರೀಕೊ ರೋಮನ್ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದರು.
ಭಾನುವಾರ ಅಂತರರಾಷ್ಟ್ರೀಯ ಕುಸ್ತಿಪಟು ಅರ್ಜುನ ಹಲಕುರ್ಕಿ 55 ಕೆ.ಜಿ ಗ್ರೀಕೊ ರೋಮನ್ ವಿಭಾಗ ದಲ್ಲಿ ಕಂಚಿನ ಪದಕ ಪಡೆದರು.
ಅರ್ಜುನ ಕಳೆದ ವರ್ಷ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗಳಿಸಿದ್ದರು. ಇವರಿಬ್ಬರೂ ಭಾರತ ಕಿರಿಯರ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆ ಯಾಗಿದ್ದಾರೆ ಎಂದು ತರಬೇತುದಾರ ಶಿವಾನಂದ 'ಪ್ರಜಾವಾಣಿ' ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.