ಉಡುಪಿ: ಅಖಿಲ ಭಾರತ ಅಂಧರ ಚೆಸ್ ಒಕ್ಕೂಟ, ಅಂತರರಾಷ್ಟ್ರೀಯ ಅಂಧರ ಚೆಸ್ ಸಂಘಟನೆ ಮತ್ತು ಅಖಿಲ ಭಾರತ ಚೆಸ್ ಒಕ್ಕೂಟ ಆಯೋಜಿಸಿರುವ ಅಂಧರ ಏಷ್ಯನ್ ಚೆಸ್ ಚಾಂಪಿಯನ್ಶಿಪ್ನ ಐದನೇ ಸುತ್ತಿನಲ್ಲಿ ಭಾರತದ ಕಿಶನ್ ಗಂಗೂಲಿ ಅವರು ಕೃಷ್ಣ ಉಡುಪ ಅವರನ್ನು ಮಣಿಸಿ ಐದು ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಾಂಗ್ಲಾದೇಶದ ಹುಸೇನ್ ಎಜಾಜ್ ಅವರು ಬಿ.ಎಲ್. ಸೋಮೇಂದರ್ ಅವರನ್ನು, ಮಕ್ವಾನ ಅಶ್ವಿನ್ ಅವರು ಯದುಜೀತ್ ಡೇ ಅವರನ್ನು ಹಾಗೂ ಸೌಂದರ್ಯ ಕುಮಾರ್ ಪ್ರಧಾನ್ ಅವರು ಆರ್ಯನ್ ಬಿ. ಜೋಶಿ ಅವರನ್ನು ಮಣಿಸಿದರು.
ಸ್ವಪ್ನಿಲ್ ಶಾ ಅವರು ವಾಗ್ಮರೆ ಸಚಿನ್ ಲಾಹು ಅವರನ್ನು, ಪ್ರಚೂರ್ಯ ಕುಮಾರ್ ಪ್ರಧಾನ್ ಅವರು ಫಿಲಿಪ್ಪೀನ್ಸ್ನ ರೊಡೊಲ್ಫೊ ಸರ್ಮೇಯಿನ್ಟೊ ಅವರನ್ನು ಸೋಲಿಸಿದರು. ವೈಶಾಲಿ ನರೇಂದ್ರ ಸಾಲ್ವಂಕರ್ ಅವರು ಕೆ. ಮಾರಿಮುತ್ತು ವಿರುದ್ಧದ ಪಂದ್ಯದಲ್ಲಿ ಸೋತರು.
ಮೃಣಾಲಿನಿ ಪಾಂಡೆ ಅವರು ಬಾಂಗ್ಲಾದ ಸರ್ಕಾರ್ ಬಪ್ಪಿ ಅವರನ್ನು, ಸಮಂತ್ ಮಿಲಿಂದ್ ಅವರು ಶ್ರೀಲಂಕಾದ ಲಿಯಾನ ಅರಚಿಲ್ಲಗೆ ಉಪುಲ್ ಅವರನ್ನು ಸೋಲಿಸಿದರು. ಶ್ರೀಲಂಕಾದ ತೌನ್ ರಶ್ದಿ ಅವರು ಪಾಟೀಲ್ ಶಿರಿಷ್ ವಿರುದ್ಧ ಸೋತರು. ಫಿಲಿಪ್ಪೀನ್ಸ್ನ ಜೋಸ್ ಎಂ. ಮಾರ್ಗ್ಯೂನಾಟ್ ಅವರು ಶ್ರೀಲಂಕಾದ ಹಿರಯಮುಲ್ಲಾ ವಿತಂಗೆ ಸಂಜೀವ ಕರುಣರತ್ನ ಅವರನ್ನು ಮಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.