ADVERTISEMENT

ರಾಜ್ಯ ತಂಡದಲ್ಲಿ ಬದಲಾವಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST

ಬೆಂಗಳೂರು: ಅಸ್ಸಾಂ ಎದುರಿನ ‘ಬಿ’ ಗುಂಪಿನ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾರ್ಖಂಡ್ ಮತ್ತು ದೆಹಲಿ ವಿರುದ್ಧದ ಪಂದ್ಯಗಳಲ್ಲಿ ಆಡಿದ್ದ ಆಟಗಾರರೇ ಮುಂದಿನ ಪಂದ್ಯಕ್ಕೂ ತಂಡದಲ್ಲಿರಲಿದ್ದಾರೆ.

ಕಾಲು ನೋವಿನಿಂದ ಬಳಲಿ ದೆಹಲಿ ಎದುರಿನ ಪಂದ್ಯಕ್ಕೆ ಅಲಭ್ಯರಾಗಿದ್ದ ಆರ್‌. ವಿನಯ್ ಕುಮಾರ್‌ ಚೇತರಿಸಿಕೊಂಡಿದ್ದು ಅಸ್ಸಾಂ ಎದುರು ತಂಡವನ್ನು ಮುನ್ನಡೆ ಸಲಿದ್ದಾರೆ.  ಅಕ್ಟೋಬರ್‌ 27ರಂದು ಮುಂಬೈನಲ್ಲಿ ಪಂದ್ಯ ನಡೆಯಲಿದೆ.

ರಾಹುಲ್‌ ಅಲಭ್ಯ:  ಗಾಯದ ಸಮಸ್ಯೆ ಯಿಂದ ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಕೆ.ಎಲ್‌. ರಾಹುಲ್‌ಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ.

ತಂಡ ಹೀಗಿದೆ:  ಆರ್‌. ವಿನಯ್‌ ಕುಮಾರ್‌ (ನಾಯಕ), ಕರುಣ್‌ ನಾಯರ್‌ (ಉಪ ನಾಯಕ) ಆರ್‌. ಸಮರ್ಥ್‌, ಮಯಂಕ್‌ ಅಗರವಾಲ್‌, ರಾಬಿನ್‌ ಉತ್ತಪ್ಪ, ಸ್ಟುವರ್ಟ್‌ ಬಿನ್ನಿ, ಸಿ.ಎಂ. ಗೌತಮ್‌, ಶ್ರೇಯಸ್ ಗೋಪಾಲ್‌, ಅಭಿಮನ್ಯು ಮಿಥುನ್‌,ಎಸ್‌.ಅರವಿಂದ್‌, ಅಬ್ರಾರ್‌ ಖಾಜಿ, ರೋನಿತ್‌ ಮೋರೆ, ಪವನ್ ದೇಶಪಾಂಡೆ, ಅರ್ಜುನ ಹೊಯ್ಸಳ ಮತ್ತು ಮೀರ್‌ ಕೌನೇನ್‌ ಅಬ್ಬಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.