ADVERTISEMENT

‘ಸಂಸ’ ಕಾದಂಬರಿ ಬಿಡುಗಡೆ

ಸಾಹಿತಿ ಸಂಸ ಕುರಿತು ಮಲೆಯೂರು ಗುರುಸ್ವಾಮಿ ಬರೆದ ಕೃತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 16:06 IST
Last Updated 4 ಅಕ್ಟೋಬರ್ 2020, 16:06 IST
ಸಂವಹನ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಂಸ’ ಕಾದಂಬರಿ ಬಿಡುಗಡೆ ಮಾಡಲಾಯಿತು. ಪ್ರೊ.ಸಿ.ಪಿ.ಕೃಷ್ಣಕುಮಾರ್, ನಂದೀಶ್‌ ಹಂಚೆ, ಡಿ.ಎನ್‌.ಲೋಕಪ್ಪ, ಮಲೆಯೂರು ಗುರುಸ್ವಾಮಿ ಪಾಲ್ಗೊಂಡಿದ್ದರು
ಸಂವಹನ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಂಸ’ ಕಾದಂಬರಿ ಬಿಡುಗಡೆ ಮಾಡಲಾಯಿತು. ಪ್ರೊ.ಸಿ.ಪಿ.ಕೃಷ್ಣಕುಮಾರ್, ನಂದೀಶ್‌ ಹಂಚೆ, ಡಿ.ಎನ್‌.ಲೋಕಪ್ಪ, ಮಲೆಯೂರು ಗುರುಸ್ವಾಮಿ ಪಾಲ್ಗೊಂಡಿದ್ದರು   

ಮೈಸೂರು: ಸಂಸ ಅವರ ವ್ಯಕ್ವಿತ್ವ, ಮನಸ್ಸು ಸಂಕೀರ್ಣವಾದದ್ದು. ಅಂತಹ ವ್ಯಕ್ತಿಯ ಕುರಿತು ಕಾದಂಬರಿ ಬರೆಯುವುದು ಸವಾಲಿನ ಸಂಗತಿ. ಅದರೆ ಮಲೆಯೂರು ಗುರುಸ್ವಾಮಿ ಅವರು ಸವಾಲಿನ ಕೆಲಸವನ್ನು ಯಶಸ್ವಿ ಯಾಗಿ ಮಾಡಿದ್ದಾರೆ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ಶ್ಲಾಘಿಸಿದರು.

ಸಂವಹನ ಪ್ರಕಾಶನ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ `ಸಂಸ' ಕಾದಂಬರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ ಅವರು ಮನೋ ವೈಕಲ್ಯದ ನಡುವೆಯೂ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ಧಾರೆ. ಸಂಸ ಪ್ರತಿಭಾವಂತರಾಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಅವರ ಪ್ರತಿಭೆ ಪೂರ್ಣರೂಪದಲ್ಲಿ ಹೊರ ಬರಲಿಲ್ಲ. ಕೆಲವು ಪಾಶ್ಚಾತ್ಯ ಸಾಹಿತಿಗಳೂ ಇದೇ ರೀತಿಯ ಮನೋವೈಕಲ್ಯದ ಸಮಸ್ಯೆ ಎದುರಿಸಿದ್ದರು ಎಂದು ತಿಳಿಸಿದರು.

ADVERTISEMENT

‘ಈ ಕಾದಂಬರಿ ಓದಿದರೆ ಪ್ರತಿಯೊಬ್ಬರಿಗೂ ಸಂಸ ಅವರು ಕಾಡುವುದು ನಿಶ್ಚಿತ. ನನಗೂ ಅದೇ ಅನುಭವ ಉಂಟಾಗಿದೆ’ ಎಂದರು.

ಸಂಸ್ಕೃತಿ ಚಿಂತಕ ಮಹೇಶ್ ಹರವೆ ಮಾತನಾಡಿ, ಜನರಿಗೆ ಸಂಸ ಅವರ ಬಗ್ಗೆ ಭಯ, ಗೌರವ ಇತ್ತು. ಈ ಕಾರಣ ಅವರೊಂದಿಗೆ ಮಾತನಾಡುವಾಗ ಎಲ್ಲರೂ ಸದಾ ಎಚ್ಚರಿಕೆಯಿಂದ ಇರುತ್ತಿದ್ದರು. ಅವರು ಏನು ಅಂದುಬಿಡುತ್ತಾರೋ ಎಂಬ ಭಯ ಮನಸ್ಸಿನ ಮೂಲೆಯಲ್ಲಿ ಇರುತ್ತಿತ್ತು ಎಂದು ಹೇಳಿದರು.

ಸಂಸ ಅವರು ಜನರೊಂದಿಗೆ ಬೆರೆತು, ತಮಗೆ ಆದ ಅನುಭವಗಳಿಗೆ ಪುಸ್ತಕದ ರೂಪ ಕೊಟ್ಟಿದ್ದಾರೆ. ಸಾಹಿತ್ಯವನ್ನು ಸಮುದಾಯದಿಂದ ಪಡೆದು ವಾಪಸ್‌ ಸಮುದಾಯಕ್ಕೆ ನೀಡಬೇಕು ಎಂಬ ನಿಲುವು ಅವರದ್ದಾಗಿತ್ತು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ಕೃತಿ ಬಿಡುಗಡೆ ಮಾಡಿದರು. ಕಾದಂಬರಿಕಾರ ಪ್ರೊ.ಮಲೆಯೂರು ಗುರುಸ್ವಾಮಿ, ಪ್ರಕಾಶಕ ಡಿ.ಎನ್. ಲೋಕಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.