ADVERTISEMENT

ರಾಸಾಯನಿಕ ಮುಕ್ತ ದಾಕ್ಷಿ

ದೇವರಾಜ್ ಮ್ಯಾದನೇರಿ ಹೊನಗಡ್ಡಿ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ರಾಸಾಯನಿಕ ಬಳಸದೇ ಮನೆಯ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ದ್ರಾಕ್ಷಿ ಬೆಳೆಗೆ ಬಳಸಿ ಯಶ ಕಂಡಿದ್ದಾರೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸೋಮಸಾಗರದ ಶೇಖರಪ್ಪ ಸೋಮನಾಳ.

ಸತತ ಪ್ರಯತ್ನ ಮತ್ತು ಪ್ರಯೋಗಶೀಲತೆಯ ಮೂಲಕ 2.5 ಎಕರೆಯಲ್ಲಿ ದ್ರಾಕ್ಷಿ ಬೆಳೆದು ವರ್ಷಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಇವರು.

ತೋಟಗಾರಿಕೆ ಇಲಾಖೆಯ ಸಲಹೆಯೊಂದಿಗೆ ಥಾಮ್ಸನ್ ನಂ 1 ತಳಿಯನ್ನು ನಾಟಿ ಮಾಡಿ ಯಶ ಪಡೆದಿರುವ ಇವರು, ದ್ರಾಕ್ಷಿಯನ್ನು ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಗಂಗಾವತಿ, ಗದಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಮಾರಾಟ ಮಾಡುತ್ತಾರೆ.

ನಾಟಿ ವಿಧಾನ
`ಸಸಿನೆಟ್ಟು ಮೇಲೆ ಅದು ದೊಡ್ಡದಾಗುವವರೆಗೆ ಬಿಡಬೇಕು. ಮುಂದಿನ ವರ್ಷದಲ್ಲಿ 2 ಬಾರಿ ಕಟಾವು ಮಾಡಬೇಕು. ದ್ರಾಕ್ಷಿ ಬಳ್ಳಿ ಹಣ್ಣು ಬಿಡುವ ವೇಳೆ 10 ರಿಂದ 15 ದಿನಕ್ಕೊಮ್ಮೆ ಚಾಟ್ನಿ ಸಿಂಪರಣೆ ಮಾಡಬೇಕು.

ಅಕ್ಟೋಬರ್‌ನಲ್ಲಿ ದ್ರಾಕ್ಷಿ ಹಸಿರು ಬಣ್ಣಕ್ಕೆ ಬರುತ್ತದೆ. ಅದಾದ ನಂತರ 120 ದಿನಗಳಲ್ಲಿ ಹಣ್ಣು ಕಟಾವು ಮಾಡುವ ಹಂತಕ್ಕೆ ಬರುತ್ತದೆ ಎಂದು ತಮ್ಮ ಯಶಸ್ವಿನ ಗುಟ್ಟು ಹೇಳುತ್ತಾರೆ ಶೇಖರಪ್ಪ.

ADVERTISEMENT

`ಒಂದು ಸಾಲಿನಲ್ಲಿ ಗಿಡದಿಂದ ಗಿಡಕ್ಕೆ 5 ಅಡಿ ಅಂತರ ಇರಬೇಕು. ಪೆಂಡಾಲ್ ಪದ್ಧತಿ ಅಥವಾ ಹ್ಯಾಂಗಿಂಗ್ ರೀತಿಯಲ್ಲಿ ಬೆಳೆಯಬಹುದು.

ಹ್ಯಾಂಗಿಂಗ್ ವ್ಯವಸ್ಥೆಯಲ್ಲಿ ಬೆಳೆದರೆ ದ್ರಾಕ್ಷಿ  ಹೆಚ್ಚು ಹಾಳಾಗದು. ಇದರಿಂದ ಕೆಲಸವೂ ಸರಳ. ತೋಟಕ್ಕೆ ಗೊಬ್ಬರ ಸುಲಭವಾಗಿ ಹಾಕಬಹುದು ಎನ್ನುತ್ತಾರೆ ಅವರು. ಸಂಪರ್ಕಕ್ಕೆ 9880974520.

-ದೇವರಾಜ್ ಮ್ಯಾದನೇರಿ ಹೊನಗಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.