‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಡಿ.20ರಂದು ಸಮನ್ವಯ ತಂಡದ ‘ಬೂಟು ಬಂದೂಕುಗಳ ನಡುವೆ’ (ರಚನೆ– ಮೈನಾ ಚಂದ್ರು,ನಿರ್ದೇಶನ– ಮಾಲತೇಶ ಬಡಿಗೇರ) ನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕದ ವಿಷಯ: ಬ್ರಿಟಿಷರ ಆಡಳಿತದ ಅವಧಿಯಲ್ಲಿ ಪ್ರತಿ ಭಾರತೀಯ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತು. ಮಲೆನಾಡಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡಲೆಂದೇ ವೃದ್ಧೆ ತನ್ನ ಗುಡಿಸಲನ್ನು ಹೋಟೆಲ್ ಆಗಿ ಮಾರ್ಪಡಿಸಿಕೊಂಡಿದ್ದಳು. ಬ್ರಿಟಿಷರ ಪಾಶವೀ ಕೃತ್ಯಕ್ಕೆ ಆಕೆಯ ಮಗ ಬಲಿಯಾಗುವ ಕಥಾನಕವಿದು.
ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆ. ಡಿ.20 ರಾತ್ರಿ 7.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.