ಅಂತರರಾಷ್ಟ್ರೀಯ ಚಿತ್ರ ಕಲಾವಿದ ಬಿಕೆಎಸ್ ವರ್ಮ ರಚಿಸಿದ ಅಪರೂಪದ ಕಲಾಕೃತಿಗಳು ಇಲ್ಲಿವೆ
ಅಂತರರಾಷ್ಟ್ರೀಯ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ (74) ಅವರು ಇಂದು (ಸೋಮವಾರ) ಬೆಳಿಗ್ಗೆ ನಿಧನರಾದರು. ಸಂಗೀತಗಾರ ಕೃಷ್ಣಮಾಚಾರ್ಯರು ಹಾಗೂ ಚಿತ್ರ ಕಲಾವಿದೆ ಜಯಲಕ್ಷ್ಮಿ ಅವರ ಮಗನಾಗಿ ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ಜನಿಸಿದ್ದ ಅವರು, ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ಗಾಂಧಿ ಪ್ರಶಸ್ತಿ ಸ್ವೀಕರಿಸಿದ್ದಾರೆ.ಅವರು ರಚಿಸಿದ ಕೆಲವು ಅಪರೂಪದ ಕಲಾಕೃತಿಗಳು ಇಲ್ಲಿವೆ.
ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 10:27 IST
Last Updated 6 ಫೆಬ್ರುವರಿ 2023, 10:27 IST
ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣ ವನವಾಸಕ್ಕೆ ಹೊರಟ ಸಂದರ್ಭ
ಪ್ರಕೃತಿ ಕುರಿತಂತೆ ಬಿ.ಕೆ.ಎಸ್. ವರ್ಮ ರಚಿಸಿದ ಕಲಾಕೃತಿಗಳು
ತಾವು ರಚಿಸಿದ ಕಲಾಕೃತಿಗಳ ವಿವರಣೆ ನೀಡುತ್ತಿರುವ ವರ್ಮ
ಬಿ.ಕೆ.ಎಸ್. ವರ್ಮ ಅವರ ಕುಂಚದಲ್ಲಿ ಪಾರ್ವತಿ
ತಪಸ್ಸಿಗೆ ತೊಡಗಿದ ಪಾರ್ವತಿ
'ದಿ ಹಾರ್ಟ್ ಸೊಸೈಟಿ ಆಫ್ ಇಂಡಿಯಾ' ಕಾರ್ಯದರ್ಶಿ ವಿಕ್ರಾಂತ್ ಶಿಟೋಲ್ ಅವರು ಬಿ.ಕೆ.ಎಸ್. ವರ್ಮ ಅವರಿಗೆ ಕಲಾ ಸುಜನ್ ಪುರಸ್ಕಾರ ನೀಡಿ ಗೌರವಿಸಿದ ಸಂದರ್ಭ. ವರ್ಮ ಅವರ ಪತ್ನಿ ಶಾಂತ ಇದ್ದಾರೆ.
ಬಿ.ಕೆ.ಎಸ್. ವರ್ಮ ರಚಿಸಿದ ಲಕ್ಷ್ಮೀ –ನಾರಾಯಣ ಕಲಾಕೃತಿ
ತಾವು ರಚಿಸಿದ ಕಲಾಕೃತಿಗಳ ವಿವರಣೆ ನೀಡುತ್ತಿರುವ ವರ್ಮ
ಬಿ.ಕೆ.ಎಸ್. ವರ್ಮ ಅವರ ಕುಂಚದಲ್ಲಿ ಭುವನೇಶ್ವರಿ
ಬಿ.ಕೆ.ಎಸ್. ವರ್ಮ ಅವರು ತಮ್ಮ ಕಲಾಕೃತಿಯ ಬಗ್ಗೆ ನಟ ರಮೇಶ್ ಅರವಿಂದ್ ಸೇರಿದಂತೆ ಇತರರಿಗೆ ವಿವರಿಸುತ್ತಿರುವುದು