`ಈ ಭೂಮಿ ನಮ್ಮದು~ (ಮೇ 20, ಸತೀಶ್ ಚಪ್ಪರಿಕೆ) ಲೇಖನ ನರ್ಮದಾ ಕಣಿವೆಯ ರೈತರ ಹೋರಾಟದ ಸಮಗ್ರ ಚಿತ್ರಣ ನೀಡಿತು. ಹೋರಾಟದ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡ ಮೇಧಾ ಪಾಟ್ಕರ್ ಅವರ ಹೋರಾಟದ ದಿನಗಳು ಆರಂಭಗೊಂಡ ಬಗ್ಗೆಯೂ ತಿಳಿಸಿತು. ಆ ರೈತರ ಭೂಮಿ ಉಳಿಯಲಿ. ಬದುಕು ಹಸನಾಗಲಿ. ಆಗ ದೇಶ ಹಸಿರಿನ ಸಮೃದ್ಧಿಯಿಂದ ಅಭಿವೃದ್ಧಿ ಹೊಂದುತ್ತದೆ.
-ಅನಾರ್ಕಲಿ ಸಲೀಂಚಿಣ್ಯ, ಶ್ರೀರಂಗಪಟ್ಟಣ
ಚಂದಪದ್ಯದಲ್ಲಿ ದೇವನೂರ ಮಹಾದೇವ ಅವರ `ಒಂದು ಲಾಲಿಪದ~ ಮತ್ತು ಅದಕ್ಕೆ ಹಾದಿಮನಿ ಅವರ ಚಿತ್ರ ಅದ್ಭುತವಾಗಿ ಸಂಯೋಜನೆಗೊಂಡು ಕಣ್ಣ ಗೊಂಬೆಗಳಲ್ಲಿ ಅಚ್ಚಳಿಯದಂತೆ ಉಳಿಯಿತು.
-ಕಾಲಕಾಲೇಶ್ವರ ಹಾದಿಮನಿ, ಮೈಸೂರು
`ಹಳತು ಹೊನ್ನು~ ಅಂಕಣದಲ್ಲಿ ಪ್ರಕಟವಾದ `ಹಕ್ಕಿ ಹಾರುತಿದೆ~ ಇಂದಿಗೂ... ಲೇಖನ ಮಾಹಿತಿಯಿಂದ ಭರ್ತಿಯಾಗಿತ್ತು. ದ.ರಾ.ಬೇಂದ್ರೆ ಅವರ ನೇತೃತ್ವದಲ್ಲಿ ಸಂಕಲನಗೊಂಡ `ಹಕ್ಕಿ ಹಾರುತಿದೆ~ ಕವನ ಸಂಕಲನ ರೂಪುಗೊಂಡ ದಿನಗಳನ್ನು ನೆನಪಿಸಿತು.
-ಎಚ್.ಬಿ. ಮಧು, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.