ರಜೆಯ ಮುಗಿಸಿ
ಮರಳಿ ಶಾಲೆಗೆ
ಬಂದರೆಲ್ಲ ಮಕ್ಕಳು
ಶಾಲೆಯ ಬಯಲಲ್ಲಿ
ಜ್ಞಾನದ ಬನದಲ್ಲಿ
ಅರಳುವ ಹೂಗಳು
ಬಿಸಿಲಿಗೆ ಬಾಡಿಲ್ಲ
ಲವಲವಿಕೆ ಕುಂದಿಲ್ಲ
ಚೈತನ್ಯದ ಚಿಲುಮೆಗಳು
ಹೊಸ ಸಮವಸ್ತ್ರ ಧರಿಸಿ
ಬೇಧ ಭಾವ ಅಳಿಸುವ
ಒಂದೇ ಬಣ್ಣದ ಚಿಟ್ಟೆಗಳು
ತಾಜಾ ತಾಜಾ ಮನಸ್ಸಿನ
ಘಮ ಘಮವೆನ್ನುವ
ಪುಸ್ತಕದ ಪುಟಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.