ಸಾವಿನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಂತಾಯಿತು ಎಂದು ಕೆಲವರು ಉದ್ಗರಿಸುವುದನ್ನು ಕಂಡಿದ್ದೇವೆ. ದಿಢೀರನೆ ಬೆಳಕು ಕಾಣಿಸಿತೆಂದೋ, ಅಶರೀರವಾಣಿಯೊಂದು ಕರೆದ ಹಾಗಾಯಿತು ಎಂದೋ ಹೇಳುವವರನ್ನು ನಾವು ನೋಡಿದ್ದೇವೆ. ಇಂಥ ಅನುಭವಗಳಿಂದ ಹೃದಯಾಘಾತವಾದರೂ ಬದುಕುಳಿದವರು ಉಂಟು. ಸಮೀಕ್ಷೆಯೊಂದರ ಪ್ರಕಾರ ರಕ್ತದಲ್ಲಿ ಇಂಗಾಲದ ಡಯಾಕ್ಸೈಡ್ ಪ್ರಮಾಣ ಹೆಚ್ಚಾಗಿದ್ದರೆ ಇಂಥ ಅನುಭವವಾಗುವುದಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.