ಸೌರಮಂಡಲದ ಒಡೆಯನು ಸೂರ್ಯನು
ಬಿಡುವಿಲ್ಲದೆ ದುಡಿಮೆಯ ಮಾಡಿಹನು
ಇರುಳೊಡನೆ ಹೋರಾಡಿ ಬೆಳಕನು ಹರಡಿ
ಬಣ್ಣದೋಕುಳಿಯಲಿ ಜಳಕವ ಮಾಡಿಹನು
ಪಯಣದ ಮೊದಲಲಿ ಮೂಡಣ ಮನೆಯಲಿ
ಸಡಗರದಿ ಬಿಡಿಸುವ ವಿಧ-ವಿಧ ಚಿತ್ತಾರ
ಚಿಲಿಪಿಲಿ ಕಲರವ ಗಿಡದಲಿ-ಮರದಲಿ
ಘಮ ಘಮ ಸುಮ ಅರಳಿವೆ ತರಾ-ತರ
ಅಡಗಿತ್ತು ಕನಸಿನ ಬೀಜ `ಹದ~ ಮಣ್ಣೊಳಗೆ
ಸವಿದಿತ್ತು ಎಳೆಕಿರಣದ ತನ್ನೊಳಗೆ
ದಿನಗಳು ಉರುಳಿ ಮೊಳಕೆಯು ಚಿಗುರಿ
ಕಾಳರಾಶಿ ತೂಗಿ ತೊನೆಯಿತು ತೆನೆಯೊಳಗೆ
ಅನ್ನದಾತನ ಮನದಿ ಮೂಡಿತು ನೆಮ್ಮದಿ
ಮರೆಯಾಯಿತು. ಹಸಿವಿನ ಬೇಗುದಿ
ಮಣ್ಣಿನ ಮಕ್ಕಳು ಮನದುಂಬಿ ನಕ್ಕರೆ
ದೇಶ ದಾಟುವುದು ಬಡತನದ ಗೆರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.