ಪರಿಸರವಿದ್ದರೆ ಹಚ್ಚನೆ ಹಸಿರು
ಭೂತಾಯಿಗದು ತುಂಬು ಬಸಿರು
ಬೀಸುತಿದ್ದರೆ ತಣ್ಣನೆ ಉಸಿರು
ಸವಿದಂತೆ ಕೆನೆ ಹಾಲು ಮೊಸರು
ಮರವಿದ್ದರೆ ಜಗಕೆ ಮಳೆ
ಮಳೆಯಿಂದಲಿ ಸಿಗುವುದು ಬೆಳೆ
ಮಳೆ ಬೆಳೆಯು ನಿಸರ್ಗದ ಕಳೆ
ಸೌಂದರ್ಯದಿ ಬೆಳಗುವುದು ಇಳೆ
ಬೆಳೆಸಬೇಕು ನಾವೆಲ್ಲಾ ಮರ
ಮರವೇ ಪರಿಸರಕೆ ವರ
ಒಂದಾಗಲಿ ನಮ್ಮೆಲ್ಲಾ ಕರ
ಬೆಳೆಸುವುದಕ್ಕಾಗಿ ಒಂದೊಂದು ಮರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.