ನವದೆಹಲಿ (ಐಎಎನ್ಎಸ್): ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆ ಸಾಮಾನ್ಯ ನಿಯಮಕ್ಕೆ (ಜಿಎಎಆರ್) ಸಂಬಂಧಿಸಿದಂತೆ ಪಾರ್ಥಸಾರಥಿ ಶೋಮ್ ಅಧ್ಯಕ್ಷತೆಯ ತಜ್ಞರ ಸಮಿತಿ ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ಅಂತಿಮ ವರದಿ ಸಲ್ಲಿಸಿದೆ.
`ಶೋಮ್ ಸಮಿತಿ~ ನೀಡಿರುವ ಶಿಫಾರಸು ಪರಿಶೀಲಿಸಿ ಮುಂದಿನ 20 ದಿನಗಳಲ್ಲಿ `ಜಿಎಎಆರ್~ಗೆ ಸಂಬಂಧಿಸಿದ ನಿಯಮಗಳನ್ನು ಅಂತಿಮಗೊಳಿಸಲಾಗುವುದು. ಇದಕ್ಕೂ ಮುನ್ನ ಹೂಡಿಕೆದಾರರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಚಿದಂಬರಂ ಹೇಳಿದರು.
`ಜಿಎಎಎಆರ್~ ನಿಯಮ ಅಂತಿಮಗೊಂಡ ನಂತರ ಅಗತ್ಯವೆನಿಸಿದರೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.ಹಿಂದಿನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು 2012-13ನೇ ಸಾಲಿನ ಬಜೆಟ್ನಲ್ಲಿ `ಜಿಎಎಆರ್~ ಪ್ರಸ್ತಾಪಿಸಿದ್ದರು.
ಆದರೆ, ಇದಕ್ಕೆ ಹೂಡಿಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ತೆರಿಗೆ ತಜ್ಞ `ಪಾರ್ಥಸಾರಥಿ ಶೋಮ್ ಸಮಿತಿ~ಯನ್ನು ಜುಲೈನಲ್ಲಿ ರಚಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್, ದೇಶಿ ಮತ್ತು ವಿದೇಶಿ ಹೂಡಿಕೆದಾರರಿಗೆ `ಜಿಎಎಆರ್~ ಕುರಿತು ಕೆಲವು ಭಿನ್ನ ಅಭಿಪ್ರಾಯಗಳಿದ್ದು, ಅವನ್ನು ಬಗೆಹರಿಸುವುದಕ್ಕೆ ಸಂಬಂಧಿಸಿ ವರದಿ ನೀಡುವಂತೆ ಸೂಚಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.