ಮುಂಬೈ (ಪಿಟಿಐ): 2012-13ನೇ ಸಾಲಿನ ಕೇಂದ್ರ ಬಜೆಟ್ ಮಾರ್ಚ್ 16ರಂದು (ಶುಕ್ರವಾರ) ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವು ತೀವ್ರ ಏರಿಳಿತ ಕಾಣುವ ಸಾಧ್ಯತೆ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಕಟಿಸಲಿರುವ ಮಧ್ಯಂತರ ಹಣಕಾಸು ಪರಾಮರ್ಶೆ, ಬಜೆಟ್ ಪೂರ್ವ ಆರ್ಥಿಕ ಸಮೀಕ್ಷಾ ವರದಿ ಇತ್ಯಾದಿ ಸಂಗತಿಗಳು ಕೂಡ ಈ ವಾರ ಷೇರುಪೇಟೆಯಲ್ಲಿ ಗರಿಷ್ಠ ಮಟ್ಟದ ತಲ್ಲಣ ಸೃಷ್ಟಿಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಗ್ರೀಸ್ ಪರಿಹಾರ ಕೊಡುಗೆಗೆ ಸಂಬಂಧಿಸಿದಂತೆ ಯೂರೋಪ್ ಒಕ್ಕೂಟ ಕೈಗೊಂಡಿರುವ ಕ್ರಮಗಳಿಂದ ಜಾಗತಿಕ ಷೇರುಪೇಟೆಗಳಲ್ಲಿ ಸ್ಥಿರತೆ ಮೂಡಿದೆ. ಆದರೆ, ದೇಶಿಯ ಮಟ್ಟದಲ್ಲಿ ಈ ವಾರ ಸಂಪೂರ್ಣವಾಗಿ `ಬಜೆಟ್~, ವಹಿವಾಟನ್ನು ನಿರ್ಧರಿಸಲಿದೆ ಎಂದು ಏಂಜೆಲ್ ಬ್ರೋಕಿಂಗ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
`ಆರ್ಬಿಐ~ ಈಗಾಗಲೇ ಬ್ಯಾಂಕುಗಳ ನಗದು ಮೀಸಲು ಅನುಪಾತವನ್ನು (ಸಿಆರ್ಆರ್) ಶೇ 0.75ರಷ್ಟು ತಗ್ಗಿಸಿದೆ. ಇದರಿಂದ ಮಾರುಕಟ್ಟೆಗೆ ಹೆಚ್ಚುವರಿಯಾಗಿ ್ಙ48 ಸಾವಿರ ಕೋಟಿಗಳಷ್ಟು ಬಂಡವಾಳ ಹರಿದು ಬರಲಿದೆ. `ಆರ್ಬಿಐ~ ಕ್ರಮದಿಂದ ವಾರಾಂತ್ಯದ ವಹಿವಾಟಿನಲ್ಲಿ ಸೂಚ್ಯಂಕ 350 ಅಂಶಗಳಷ್ಟು ಏರಿಕೆ ಕಂಡಿದೆ.
`ಆರ್ಬಿಐ~ ಅನಿರೀಕ್ಷಿತ ನಿರ್ಧಾರವು ಷೇರುಪೇಟೆಯಲ್ಲಿ ಚೇತರಿಕೆ ತಂದಿರುವುದೇನೋ ನಿಜ, ಆದರೆ, ಬಜೆಟ್ ಹಿನ್ನೆಲೆಯಲ್ಲಿ, ಸೋಮವಾರದಿಂದ ವಹಿವಾಟಿನ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ ಎಂದು `ವೇ-ಟು-ವೆಲ್ತ್~ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಷ್ ಬಳಿಗಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.