ADVERTISEMENT

ಬಹರೇನ್‌ನಲ್ಲಿ ಇಂದು `ಕನ್ನಡ ವೈಭವ'

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಮನಾಮ (ಬಹರೇನ್):  `ಬಹರೇನ್ ಕನ್ನಡ ಸಂಘ'  ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದ್ವೀಪ ದೇಶದ ರಾಷ್ಟ್ರೀಯ ದಿನದಂದು ಸಾರಲು `ಕನ್ನಡ ವೈಭವ - 2012'ನ್ನು ಸ್ಥಳೀಯ ಮರೀನ ಕ್ಲಬ್ ಸಮೀಪದ `ಸಾಂಸ್ಕೃತಿಕ ಸಭಾಂಗಣ'ದಲ್ಲಿ  ಡಿ.16 ರಂದು ಸಂಜೆ 5.30ಕ್ಕೆ ಹಮ್ಮಿಕೊಂಡಿದೆ.

ಉನ್ನತ ಶಿಕ್ಷಣ ಖಾತೆ ಸಚಿವರಾದ ಸಿ.ಟಿ.ರವಿ ಮತ್ತು ಬೆಂಗಳೂರಿನ ಯು.ಎಲ್.ಬಿ. ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಕುಮಾರ್  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ನಟ ದಿಗಂತ್, ಖ್ಯಾತ ನಟಿ ಐಂದ್ರಿತಾ ರೇ ಅವರು ಭಾಗವಹಿಸಲಿದ್ದಾರೆ.

ಬೆಂಗಳೂರಿನ ಖ್ಯಾತ ಯುವ ಗಾಯಕ ಚಿನ್ಮಯ್ ಮತ್ತು ತಂಡದಿಂದ ರಸಮಂಜರಿ, ಅಶೋಕ್ ಪೊಳಲಿ ಅವರಿಂದ ಗೊಂಬೆ ನೃತ್ಯ ನಡೆಯಲಿದೆ ಎಂದು ಕನ್ನಡ ಸಂಘ ಅಧ್ಯಕ್ಷ ರಾಜ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.