ADVERTISEMENT

ಮಹತ್ವದ ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಟಬ್ರಿಜ್/ ಇರಾನ್ (ಪಿಟಿಐ): ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ `ಜಿ-20~ ದೇಶಗಳ ಹಣಕಾಸು ಸಚಿವರು ಬದ್ಧವಾಗಿರುವುದು ಮಹತ್ವದ ಸಾಧನೆಯಾಗಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ವ್ಯಕ್ತಪಡಿಸಿದ್ದ ಕಳವಳಕ್ಕೆ `ಜಿ-20~ ದೇಶಗಳ ಹಣಕಾಸು ಸಚಿವರು ಸ್ಪಂದಿಸಿರುವುದು ಕಂಡು ತಮಗೆ ಸಂತಸ ವಾಗಿದೆ. ಈ ವಿಷಯವು ನವೆಂಬರ್ 3ರಿಂದ ಕಾನ್ಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಮಂಡನೆಯಾಗಲಿದೆ ಎಂದೂ  ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಭಾರತದ ದೃಷ್ಟಿಕೋನದಿಂದ ನೋಡಿದರೆ, ಬ್ಯಾಂಕಿಂಗ್ ವಹಿವಾಟು ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ `ಜಿ-20~ ದೇಶಗಳು ಸಮ್ಮತಿಸಿರುವುದು ಮಹತ್ವದ ಸಾಧನೆಯಾಗಿದೆ ಎಂಬುದು ಪ್ರಣವ್ ಅವರ ಅಭಿಮತವಾಗಿದೆ. ಪ್ಯಾರಿಸ್‌ನಲ್ಲಿ ನಡೆದ `ಜಿ-20~ ದೇಶಗಳ ಹಣಕಾಸು ಸಚಿವರ ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಗವರ್ನರ್‌ಗಳ ಎರಡು ದಿನಗಳ ಸಮಾವೇಶದಲ್ಲಿ ಪ್ರಣವ್ ಭಾಗವಹಿಸಿದ್ದರು.

ADVERTISEMENT

ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದಂತೆ ದೇಶ - ದೇಶಗಳ ಮಧ್ಯೆ ಸಮಗ್ರ ಮಾಹಿತಿ ವಿನಿಮಯ ನಡೆಯಬೇಕು.   `ಜಿ-20~ ದೇಶಗಳು ಸ್ವಇಚ್ಛೆಯಿಂದ ಮಾಹಿತಿ ವಿನಿಮಯಕ್ಕೆ  ಮುಂದಾಗಬೇಕು ಎಂದೂ ಪ್ರಣವ್  ಬಲವಾಗಿ  ಪ್ರತಿಪಾದಿಸಿದ್ದರು.ಸರಕುಗಳ ಬೆಲೆ ಏರಿಳಿತ, ಕರೆನ್ಸಿ ಸಮರ ಮತ್ತು ತೆರಿಗೆ ಕುರಿತ ಚರ್ಚೆಯನ್ನು ಮೆಕ್ಸಿಕೊದಲ್ಲಿ ನಡೆಯಲಿರುವ ಸಚಿವರ ಸಭೆಗೆ ಶಿಫಾರಸು ಮಾಡದಿರುವ ಬಗ್ಗೆಯೂ ಪ್ರಣವ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.