
ಪ್ರಜಾವಾಣಿ ವಾರ್ತೆ
ಬೆಂಗಳೂರು: `ಪ್ರಸಕ್ತ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ 1ರ ಬಡ್ಡಿ ದರದಲ್ಲಿ ರೂ. 1,259 ಕೋಟಿ ಬೆಳೆ ಸಾಲ ನೀಡಲಾಗಿದೆ~ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
`ಎರಡು ತಿಂಗಳಲ್ಲಿ ಪಡೆದ ದಾಖಲೆ ಪ್ರಮಾಣದ ಸಾಲ ಇದು. ಒಟ್ಟು 3,43,641 ಮಂದಿ ರೈತರು ಹೊಸದಾಗಿ ಸಾಲ ಪಡೆದಿದ್ದಾರೆ~ ಎಂದು ವಿವರಿಸಿದರು.
`ವಿಜಾಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರೈತರು ಅತಿ ಹೆಚ್ಚು ಸಾಲ ಪಡೆದಿದ್ದಾರೆ. `ಪ್ರತಿವಾರವೂ ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯ ಪ್ರಗತಿ ಪರಿಶೀಲಿಸಲಾಗುವುದು~ ಎಂದರು.
`2010-11ನೇ ಸಾಲಿನಲ್ಲಿ ಶೇ 88ರಷ್ಟು ಸಾಲ ವಸೂಲಾಗಿದೆ. ಈ ವರ್ಷ ಅದು ಶೇ 95ರಷ್ಟಾಗುವ ಸಾಧ್ಯತೆ ಇದೆ~ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.