ನವದೆಹಲಿ: ದೇಶದ ಗ್ರಾಮೀಣ ಪ್ರದೇಶದ ಜನರನ್ನು ತಲುಪುವುದಕ್ಕಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಬಾರಿ ಹಿಂದಿಯಲ್ಲಿ ಬಜೆಟ್ ಭಾಷಣ ಮಾಡಿದ್ದಾರೆ.
ಸಾಮಾನ್ಯವಾಗಿ ಬಜೆಟ್ ಮಂಡನೆ ಮುನ್ನ ಹಣಕಾಸು ಸಚಿವರು ಮಾಡುವ ಭಾಷಣ ಇಂಗ್ಲಿಷ್ನಲ್ಲಿರುತ್ತದೆ. ಆದರೆ ಈ ಬಾರಿ ಸಾಮಾನ್ಯ ಜನರನ್ನು ಓಲೈಸುವುದಕ್ಕಾಗಿ ಸಚಿವರು ಕೆಲವು ಅಂಶಗಳನ್ನು ಇಂಗ್ಲಿಷ್ನಲ್ಲಿ ಹೇಳಿದ ನಂತರ ಅದನ್ನೇ ಹಿಂದಿಯಲ್ಲಿ ಹೇಳುವ ಮೂಲಕ ದ್ವಿಭಾಷೆಯಲ್ಲಿ ಸಂವಹನ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.