ADVERTISEMENT

ವಂಚನೆ ತಡೆಗೆ ಭಾರ್ತಿ ಆಕ್ಸಾ ಕ್ರಮ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:30 IST
Last Updated 29 ಜನವರಿ 2019, 20:30 IST

ಬೆಂಗಳೂರು: ವಿಮೆ ವಹಿವಾಟಿಗೆ ಸಂಬಂಧಿಸಿದಂತೆ ಮೋಸದ ಕರೆ ಮತ್ತು ವಂಚನೆಯ ಮಾರಾಟಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಭಾರ್ತಿ ಆಕ್ಸಾ ಲೈಫ್ ಇನ್ಶೂರೆನ್ಸ್ ಕಂಪನಿ ಮುಂದಾಗಿದೆ.

ವಿಮೆ ಉತ್ಪನ್ನಗಳ ಬಗ್ಗೆ ತಪ್ಪು ಮಾಹಿತಿ ನೀಡುವುದು, ಸೂಕ್ತವಲ್ಲದ ಉತ್ಪನ್ನ ಮಾರಾಟ ಮಾಡುವುದು, ವಿಮೆ ಕಂಪನಿಗಳ ಉದ್ಯೋಗಿಗಳೆಂದು ಹೇಳಿಕೊಂಡು ಗರಿಷ್ಠ ಪ್ರತಿಫಲದ ಆಸೆ ತೋರಿಸಿ ವಂಚನೆ ಎಸಗುವವರ ವಿರುದ್ಧ ಜನಜಾಗೃತಿಗೆ ಸಂಸ್ಥೆ ಕ್ರಮ ಕೈಗೊಂಡಿದೆ. ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಶಿಬಿರ ಮತ್ತು ಕಾರ್ಯಕ್ರಮಗಳನ್ನು ದೇಶದಾದ್ಯಂತ ಇರುವ ಸಂಸ್ಥೆಯ ಶಾಖೆಗಳಲ್ಲಿ ಆಯೋಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT