ADVERTISEMENT

‘ಸಿಮೆಂಟ್, ಉಕ್ಕು ಉದ್ಯಮದಿಂದ ಬೆಲೆ ಹೆಚ್ಚಳ ಕೂಟ’

ಪಿಟಿಐ
Published 10 ಜನವರಿ 2021, 16:46 IST
Last Updated 10 ಜನವರಿ 2021, 16:46 IST

ಮುಂಬೈ: ಉಕ್ಕು ಮತ್ತು ಸಿಮೆಂಟ್ ಉದ್ಯಮದ ದೊಡ್ಡ ಕಂಪನಿಗಳು ಬೆಲೆ ಹೆಚ್ಚಿಸಲು ಕೂಟ ರಚಿಸಿಕೊಂಡಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.

ಈ ವಿಚಾರವಾಗಿ ತಾವು ಪ್ರಧಾನಿ ಹಾಗೂ ಪ್ರಧಾನಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿರುವುದಾಗಿಯೂ ಗಡ್ಕರಿ ತಿಳಿಸಿದ್ದಾರೆ. ಉಕ್ಕು ಉದ್ಯಮದ ಎಲ್ಲ ಕಂಪನಿಗಳು ತಮ್ಮದೇ ಆದ ಕಬ್ಬಿಣದ ಅದಿರು ಗಣಿ ಹೊಂದಿವೆ. ಅವು ಕಾರ್ಮಿಕರ ಅಥವಾ ಇಂಧನ ವೆಚ್ಚದಲ್ಲಿ ಹೆಚ್ಚಳ ಕಂಡಿಲ್ಲ. ಹೀಗಿದ್ದರೂ, ಉಕ್ಕು ಉದ್ಯಮವು ಬೆಲೆ ಹೆಚ್ಚಿಸುತ್ತಿರುವುದು ಹೇಗೆ ಎಂದು ಗಡ್ಕರಿ ಪ್ರಶ್ನಿಸಿದರು.

‘ಈ ಸಮಸ್ಯೆಗೆ ಪರಿಹಾರ ಕಾಣುವ ಹಾದಿಯಲ್ಲಿ ನಾವಿದ್ದೇವೆ. ಉಕ್ಕು ಮತ್ತು ಸಿಮೆಂಟ್ ಉದ್ಯಮಕ್ಕೆ ನಿಯಂತ್ರಕರು ಬೇಕು ಎಂಬ ಆಗ್ರಹವನ್ನು ಪರಿಶೀಲಿಸಲಾಗುವುದು. ಇದರ ಬಗ್ಗೆ ನಾನು ಹಣಕಾಸು ಸಚಿವಾಲಯ ಹಾಗೂ ಪ್ರಧಾನಿ ಜೊತೆ ಮಾತನಾಡುವೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.