ADVERTISEMENT

ಕ್ಯಾಟಮಾರನ್‌ ಸಂಸ್ಥೆಗೆ ರಂಗನಾಥ್ ಚೇರ್ಮನ್

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 16:02 IST
Last Updated 9 ಆಗಸ್ಟ್ 2022, 16:02 IST

ಬೆಂಗಳೂರು: ಹೂಡಿಕೆ ಸಂಸ್ಥೆಯಾಗಿರುವ ಕ್ಯಾಟಮಾರನ್‌, ಎಂ.ಡಿ. ರಂಗನಾಥ್ ಅವರನ್ನು ತನ್ನ ಚೇರ್ಮನ್‌ ಆಗಿ ಈಚೆಗೆ ನೇಮಕ ಮಾಡಿದೆ. ರಂಗನಾಥ್ ಅವರು ಸಂಸ್ಥೆಯ ಅಧ್ಯಕ್ಷ ಹುದ್ದೆಯನ್ನು ಮೂರು ವರ್ಷ ನಿಭಾಯಿಸಿದ್ದರು.

ದೀಪಕ‌್ ಪದಕಿ ಅವರನ್ನು ಸಂಸ್ಥೆಯು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಸಂಸ್ಥೆಯ ಹೂಡಿಕೆ ನಿರ್ವಹಣೆ ಕಾರ್ಯತಂತ್ರವನ್ನು ರೂಪಿಸುವ ಹೊಣೆಯು ಪದಕಿ ಅವರ ಮೇಲಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

‘ಪದಕಿ ಮತ್ತು ರಂಗನಾಥ್ ಅವರ ನೇಮಕ ಸಂತಸ ತಂದಿದೆ’ ಎಂದು ಸಂಸ್ಥೆಯ ಸ್ಥಾಪಕ ಹಾಗೂ ಗೌರವಾಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.