ನವದೆಹಲಿ: ಮಣ್ಣಿನ ಫಲವತ್ತತೆಯ ಕಾರ್ಡ್ನಲ್ಲಿ ಶಿಫಾರಸು ಮಾಡಿರುವಂತೆ ರಸಗೊಬ್ಬರ ಮತ್ತು ಪೌಷ್ಟಿಕಾಂಶಗಳನ್ನು ಬಳಸಿರುವುದರಿಂದ ಇಳುವರಿ ಶೇ 5ರಿಂದ ಶೇ 6ರಷ್ಟು ಹೆಚ್ಚಾಗಿದೆ.
ಬೆಳೆಗಳ ಆಧಾರದ ಮೇಲೆ ರೈತರ ವರಮಾನ ಒಂದು ಎಕರೆಗೆ ₹ 30 ಸಾವಿರದವರೆಗೂ ಏರಿಕೆಯಾಗಿದೆ ಎಂದುರಾಷ್ಟ್ರೀಯ ಉತ್ಪಾದಕತೆ ಸಮಿತಿಯು (ಎನ್ಪಿಸಿ) ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.
2015ರಿಂದ ಮಣ್ಣಿನ ಫಲವತ್ತತೆಯ ಕಾರ್ಡ್ ಬಳಸಲು ಆರಂಭಿಸಿದ ಮೇಲೆ ರಾಸಾಯನಿಕಯುಕ್ತ ರಸಗೊಬ್ಬರ ಬಳಕೆ ಪ್ರಮಾಣ ಶೇ 8 ರಿಂದ ಶೇ 10ರಷ್ಟು ಕಡಿಮೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.