ADVERTISEMENT

ಹಣ ಅಕ್ರಮ ವರ್ಗಾವಣೆ ವಿವಿಧೆಡೆ ಇ.ಡಿ ಶೋಧ

ಪಿಟಿಐ
Published 15 ಫೆಬ್ರುವರಿ 2022, 21:04 IST
Last Updated 15 ಫೆಬ್ರುವರಿ 2022, 21:04 IST
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ ಮುಂಬೈನ ಗಾರ್ಡನ್‌ ಹಾಲ್‌ ಕಟ್ಟಡದ ಮುಂದೆ ಮಂಗಳವಾರ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು –ಪಿಟಿಐ ಚಿತ್ರ
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ ಮುಂಬೈನ ಗಾರ್ಡನ್‌ ಹಾಲ್‌ ಕಟ್ಟಡದ ಮುಂದೆ ಮಂಗಳವಾರ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು –ಪಿಟಿಐ ಚಿತ್ರ   

ನವದೆಹಲಿ: 1993ರ ಮುಂಬೈ ಸ್ಫೋಟ ಪ್ರಕರಣದ ಸೂತ್ರದಾರ ದಾವೂದ್‌ ಇಬ್ರಾಹಿಂ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈಚೆಗೆ ದಾಖಲಿಸಿಕೊಂಡಿದ್ದ ಎಫ್‌ಐಆರ್‌ ಆಧರಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಂಗಳವಾರ ಮುಂಬೈನ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ.

ಭೂಗತಲೋಕದ ಕಾರ್ಯಾಚರಣೆ, ಅಕ್ರಮ ಆಸ್ತಿ, ಹವಾಲ ವಹಿವಾಟಿಗಾಗಿ ನಡೆದಿರುವ ಹಣ ಅಕ್ರಮ ವರ್ಗಾ ವಣೆಯ ತನಿಖೆಯ ಸಂಬಂಧ ಶೋಧ ನಡೆದಿದೆ ಎಂದು ಇ.ಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT