ADVERTISEMENT

ಸರಳಗೊಳ್ಳಲಿದೆ ಜಿಎಸ್‌ಟಿ ಮರುಪಾವತಿ

ಆಗಸ್ಟ್‌ನಿಂದ ಜಾರಿಗೆ ತರಲು ಕೇಂದ್ರದ ಸಿದ್ಧತೆ

ಪಿಟಿಐ
Published 26 ಮೇ 2019, 20:00 IST
Last Updated 26 ಮೇ 2019, 20:00 IST
   

ನವದೆಹಲಿ: ಸರಳೀ ಕೃತಜಿಎಸ್‌ಟಿ ಮರುಪಾವತಿ ವ್ಯವಸ್ಥೆಯು ಆಗಸ್ಟ್‌ನಿಂದಜಾರಿಗೆ ಬರಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ, ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳುಜಿಎಸ್‌ಟಿ ಮರುಪಾವತಿ ಪ್ರಕ್ರಿಯೆಗೆ ಪ್ರತ್ಯೇಕವಾಗಿ ಅನುಮೋದನೆ ನೀಡುತ್ತಿದ್ದಾರೆ.

ಮರುಪಾವತಿಗೆ ಅರ್ಜಿ ಸಲ್ಲಿಸಿದ ಬಳಿಕ ಕೇಂದ್ರದಿಂದ ಶೇ 50ರಷ್ಟು ಮೊತ್ತ ಪಾವತಿಯಾಗುತ್ತಿದೆ. ಇನ್ನುಳಿದ ಮೊತ್ತಕ್ಕೆ ರಾಜ್ಯ ತೆರಿಗೆ ಅಧಿಕಾರಿಗಳು ಅನುಮೋದನೆ ನೀಡುತ್ತಿದ್ದಾರೆ. ಇದರಿಂದ ಪೂರ್ತಿ ಮೊತ್ತ ತೆರಿಗೆದಾರರ ಕೈಸೇರುವಲ್ಲಿ ವಿಳಂಬವಾಗುತ್ತಿದೆ.

ADVERTISEMENT

ಆಗಸ್ಟ್‌ನಿಂದ ಯಾವುದಾದರೂ ಒಂದು ತೆರಿಗೆ ಇಲಾಖೆಯ ಅಧಿಕಾರಿಗಳು ಮರುಪಾವತಿಗೆ ಅನುಮತಿ ನೀಡಲಿದ್ದಾರೆ. ಈ ವ್ಯವಸ್ಥೆ ಜಾರಿಗೆ ತರಲುರೆವಿನ್ಯೂ ಇಲಾಖೆ ಕಾರ್ಯಗತವಾಗಿದೆ ಎಂದು ಹೇಳಿದ್ದಾರೆ.

ಹೊಸ ವ್ಯವಸ್ಥೆಯಲ್ಲಿ ಮರುಪಾವತಿಗೆ ಅರ್ಜಿ ಸಲ್ಲಿಸದ ಬಳಿಕ ಕೇಂದ್ರ ಅಥವಾ ರಾಜ್ಯದ ತೆರಿಗೆ ಅಧಿಕಾರಿಗಳು ಅದನ್ನು ಪರಿಶೀಲನೆ ನಡೆಸಿ ಪೂರ್ತಿ ಮೊತ್ತವನ್ನು ನೀಡಲಿದ್ದಾರೆ. ಆ ಬಳಿಕ ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಆಂತರಿಕ ಖಾತೆ ಹೊಂದಾಣಿಕೆ ಮೂಲಕ ಮರುಪಾವತಿಯನ್ನು ಇತ್ಯರ್ಥಪಡಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.