ನವದೆಹಲಿ: ದೇಶದಲ್ಲಿ ಮುಂಗಾರು ಉತ್ತಮವಾಗಿದ್ದು, ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ.
ಕೃಷಿ ಚಟುವಟಿಕೆಗಳ ಮೇಲೆ ಕೋವಿಡ್ ಪರಿಣಾಮ ಬೀರಿಲ್ಲ. ಈ ಬಾರಿ ಜುಲೈ 17ರವರೆಗೆ 6.92 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 21.2ರಷ್ಟು ಹೆಚ್ಚುವರಿ ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 5.71 ಕೋಟಿ ಹೆಕ್ಟೇರ್ಗಳಲ್ಲಿ ಬಿತ್ತನೆ ಆಗಿತ್ತು. ಸಾಮಾನ್ಯವಾಗಿ ಮುಂಗಾರು ದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ರೈತರು ಜೂನ್ನಿಂದ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಅದು ಜುಲೈ ಅಂತ್ಯದವರೆಗೆ ಅಥವಾ ಆಗಸ್ಟ್ನ ಮೊದಲ ವಾರದವರೆಗೂ ಮುಂದುವರಿಯುತ್ತದೆ.
ಸೋಯಾಬೀನ್ ಬಿತ್ತನೆಯು ಈ ಬಾರಿ ಶೇ 15ರಷ್ಟು ಹೆಚ್ಚಾಗುವ ಅಂದಾಜು ಮಾಡಲಾಗಿದೆ. ಕಬ್ಬು ಬಿತ್ತನೆ ಪ್ರದೇಶವು 50 ಲಕ್ಷ ಹೆಕ್ಟೇರ್ನಿಂದ 51 ಲಕ್ಷ ಹೆಕ್ಟೇರ್ಗೆ ಏರಿಕೆಯಾಗಿದೆ. ಏಕದಳಧಾನ್ಯಗಳ ಬಿತ್ತನೆ 1.03 ಕೋಟಿ ಹೆಕ್ಟೇರ್ಗಳಿಂದ 1.15 ಕೋಟಿ ಹೆಕ್ಟೇರ್ಗಳಿಗೆ ಶೇ 12ರಷ್ಟು ಹೆಚ್ಚಾಗಿದೆ. ಸರಾಸರಿಗಿಂತಲೂ ಅಧಿಕ ಮಳೆಯಾಗುತ್ತಿರುವುದರಿಂದ ದೇಶದ ಪ್ರಮುಖ123 ಜಲಾಶಯಗಳ ನೀರಿನ ಮಟ್ಟ ಉತ್ತಮ ಸ್ಥಿತಿಯಲ್ಲಿದೆ ಎಂದು ಸಚಿವಾಲಯ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.