
ನಿರ್ಮಲಾ ಸೀತಾರಾಮನ್ –ಪಿಟಿಐ ಚಿತ್ರ
ಮುಂಬೈ: ಭಾರತದಲ್ಲಿ ದೊಡ್ಡದಾದ ಹಾಗೂ ವಿಶ್ವದರ್ಜೆಯ ಬ್ಯಾಂಕ್ಗಳ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಈ ವಿಚಾರವಾಗಿ ಆರ್ಬಿಐ ಜೊತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
‘ಈ ವಿಚಾರವಾಗಿ ಕೆಲಸವು ಈಗಾಗಲೇ ಶುರುವಾಗಿದೆ. ನಾವು ಬ್ಯಾಂಕ್ಗಳ ಜೊತೆಯೂ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
‘ಸರ್ಕಾರವು ತೀರ್ಮಾನ ತೆಗೆದುಕೊಳ್ಳುವ ಮೊದಲು ಬಹಳಷ್ಟು ಕೆಲಸಗಳು ಆಗಬೇಕಿವೆ. ಈಗಾಗಲೇ ಅಸ್ತಿತ್ವದಲ್ಲಿರುವ ಬ್ಯಾಂಕ್ಗಳಿಂದ ಒಂದು ಬ್ಯಾಂಕ್ ಸೃಷ್ಟಿಸುವ ಮೂಲಕ ಈ ಕೆಲಸ ಆಗದು. ವಿಲೀನದ ಮೂಲಕ ಅದನ್ನು ಮಾಡಬಹುದು, ಅದು ಕೂಡ ಒಂದು ಮಾರ್ಗ. ಆದರೆ ಹೆಚ್ಚಿನ ಬ್ಯಾಂಕ್ಗಳು ಕೆಲಸ ಮಾಡಲು ಅವಕಾಶ ನೀಡುವ ವ್ಯವಸ್ಥೆಯೊಂದು ರೂಪುಗೊಳ್ಳಬೇಕು...’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.