ಮುಂಬೈ: ಆರ್ಥಿಕ ಬೆಳವಣಿಗೆ ಕಂಡುಬರುತ್ತಿರುವುದರಿಂದ,ಹಣದುಬ್ಬರ ದರವು ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ರೆಪೊ ದರದಲ್ಲಿ ಇನ್ನಷ್ಟು ಕಡಿತ ಮಾಡಲು ಅವಕಾಶ ಸಿಗಲಿಕ್ಕಿಲ್ಲ ಎಂದು ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆಯು ಏರಿಕೆ ದಾಖಲಿಸಿದೆ. ಆರು ತಿಂಗಳ ಅವಧಿಯಲ್ಲಿ ಇದು ಏರಿಕೆ ಕಂಡಿದ್ದು ಇದೇ ಮೊದಲು. ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗುತ್ತಿರುವುದು, ಇಂಧನ ಬಳಕೆ ಹೆಚ್ಚುತ್ತಿರುವುದು ಕೂಡ ಅರ್ಥ ವ್ಯವಸ್ಥೆಯ ಚೇತರಿಕೆಯ ವಿಚಾರದಲ್ಲಿ ಒಳ್ಳೆಯ ಲಕ್ಷಣಗಳು ಎಂದು ತಜ್ಞರು ಹೇಳಿದ್ದಾರೆ.
ಹಣದುಬ್ಬರ ದರವು ಅಕ್ಟೋಬರ್ ತಿಂಗಳಿನಲ್ಲಿ ಶೇಕಡ 7ಕ್ಕಿಂತ ಹೆಚ್ಚಾಗಿರುವ ಕಾರಣ, ರೆಪೊ ದರ ಕಡಿತ ಮಾಡುವ ಈಗಿನ ಪ್ರಕ್ರಿಯೆಯು ಕೊನೆಗೊಳ್ಳುವ ಹಂತದಲ್ಲಿದೆ ಎಂಬ ಅಭಿಪ್ರಾಯ ಹೆಚ್ಚೆಚ್ಚು ವ್ಯಕ್ತವಾಗುತ್ತಿದೆ. ‘ಆರ್ಬಿಐ ನಿಗದಿ ಮಾಡಿಕೊಂಡಿದ್ದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ಹಣದುಬ್ಬರ ದಾಖಲಾಗಿದೆ. ಈ ಸಂದರ್ಭದಲ್ಲಿ ರೆಪೊ ದರಗಳನ್ನು ಹೆಚ್ಚಿಸುವ ಯೋಚನೆ ಮಾಡಬೇಕು’ ಎಂದು ಬ್ಯಾಂಕ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞರ ಸಮೀರ್ ನಾರಂಗ್ ಹೇಳಿದರು.
ಆರ್ಥಿಕತೆ ಚೇತರಿಕೆಯ ಹಾದಿಗೆ ಮರಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಆರ್ಬಿಐ ಈಚೆಗೆ ಹೇಳಿರುವ ಮಾತನ್ನು ಕೆಲವು ವಿಶ್ಲೇಷಕರು, ‘ಬೆಳವಣಿಗೆಗೆ ಇಂಬು ಕೊಡಲು ಬ್ಯಾಂಕ್ ಹೆಚ್ಚಿನ ಕ್ರಮವನ್ನೇನೂ ಕೈಗೊಳ್ಳಬೇಕಾಗಿರಲಿಕ್ಕಿಲ್ಲ’ ಎಂದು ಅರ್ಥೈಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.