ADVERTISEMENT

ಉದಯಂ ಬ್ರ್ಯಾಂಡ್‌ಗೆ ಶಿವಣ್ಣ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 14:28 IST
Last Updated 9 ಮಾರ್ಚ್ 2022, 14:28 IST
ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್   

ಬೆಂಗಳೂರು: ಧೋತಿ ಮತ್ತು ಅಂಗಿಗಳನ್ನು ಸಿದ್ಧಪಡಿಸುವ ‘ಉದಯಂ’ ಕಂಪನಿಯು ನಟ ಶಿವರಾಜ್‌ ಕುಮಾರ್ ಅವರ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ, ಶಿವರಾಜ್ ಕುಮಾರ್ ಅವರು ಕಂಪನಿಯ ಬ್ರ್ಯಾಂಡ್ ರಾಯಭಾರಿ ಆಗಲಿದ್ದಾರೆ.

ತೆರೆಯ ಮೇಲೆಯೂ, ತೆರೆಯ ಹಿಂದೆಯೂ ಹೀರೊ ಆಗಿರುವ ಶಿವಣ್ಣ ಅವರ ಜೊತೆ ಪಾಲುದಾರಿಕೆ ಹೊಂದುತ್ತಿರುವುದು ಸಂತಸದ ವಿಚಾರ ಎಂದು ಕಂಪನಿಯು ಪ್ರಕಟಣೆಯಲ್ಲಿ ಹೇಳಿದೆ.

‘ಸ್ವದೇಶಿ ಬ್ರ್ಯಾಂಡ್ ಆಗಿರುವ ಉದಯಂ ಜೊತೆ ಗುರುತಿಸಿಕೊಳ್ಳುತ್ತಿರುವುದು ನನಗೆ ವಿಶೇಷ ಅನ್ನಿಸುತ್ತಿದೆ. ನನ್ನ ಪಾಲಿಗೆ ಉದಯಂ ಒಂದು ಬ್ರ್ಯಾಂಡ್‌ ಮಾತ್ರ ಆಗಿರದೆ, ಸ್ಫೂರ್ತಿಯೂ ಹೌದು’ ಎಂದು ಶಿವರಾಜ್ ಕುಮಾರ್ ಅವರು ಹೇಳಿರುವುದಾಗಿ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.