ಬೆಂಗಳೂರು: ಕರ್ಣಾಟಕ ಬ್ಯಾಂಕ್ ಗ್ರಾಹಕರ ಸೇವೆಗಾಗಿ ‘ಕೆಬಿಎಲ್ ಎಕ್ಸ್ಪ್ರೆಸ್’ ಉಳಿತಾಯ ಖಾತೆಯನ್ನು ಆರಂಭಿಸಿದೆ. ಟ್ಯಾಬ್ಗಳನ್ನು ಬಳಸಿ ಅತ್ಯಂತ ಕ್ಷಿಪ್ರವಾಗಿ ಸ್ಥಳದಲ್ಲೇ ಎಕ್ಸ್ಪ್ರೆಸ್ ಉಳಿತಾಯ ಖಾತೆ ತೆರೆಯಬಹುದಾಗಿದೆ.
ಬ್ಯಾಂಕಿನ ಅಧಿಕಾರಿಗಳು ಗ್ರಾಹಕರ ಮನೆಬಾಗಿಲಿಗೆ ಹೋಗಿ ಖಾತೆಗೆ ಸಂಬಂಧಪಟ್ಟ ವಿಷಯಗಳನ್ನು ಟ್ಯಾಬ್ನಲ್ಲಿ ಸಂಗ್ರಹಿಸಿ ತಕ್ಷಣವೇ ಎಕ್ಸ್ಪ್ರೆಸ್ ಉಳಿತಾಯ ಖಾತೆ ತೆರೆಯಲಿದ್ದು, ಸಕ್ರಿಯವಾಗಿರುವ ಡೆಬಿಟ್ ಕಾರ್ಡ್ ನೀಡುವರು. ಅಲ್ಲದೇ ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನೂ ಒದಗಿಸಲಿದ್ದಾರೆ. ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ಅವರು ಬೆಂಗಳೂರಿನಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಗ್ರಾಹಕರು ಕೇವಲ 10 ನಿಮಿಷಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಬಹುದು. ಆರಂಭದಲ್ಲಿ ಈ ಸೌಲಭ್ಯ ಬೆಂಗಳೂರು ನಗರದಲ್ಲಿ ಲಭ್ಯವಿದ್ದು, ನಂತರ ದೇಶದಾದ್ಯಂತ ಈ ಸೌಲಭ್ಯ ದೊರಕಲಿದೆ’ ಎಂದುತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.