ADVERTISEMENT

ಹಾಲುಮತ ಸಮಾಜದ ಕೊಡುಗೆ ಸ್ಮರಣೀಯ: ವಿರೂಪಾಕ್ಷಪ್ಪ

ಯಲಬುರ್ಗಾ: ಬೀರಲಿಂಗೇಶ್ವರ ಜಾತ್ರೆ, ಅದ್ದೂರಿ ಪಲ್ಲಕ್ಕಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 11:11 IST
Last Updated 22 ಫೆಬ್ರುವರಿ 2020, 11:11 IST
ಯಲಬುರ್ಗಾ ಪಟ್ಟಣದ ಬೀರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಶುಕ್ರವಾರ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ, ರೇವಣಪ್ಪ ಹಿರೇಕುರುಬರ, ರಾಮಣ್ಣ ಸಾಲಭಾವಿ ಇದ್ದರು
ಯಲಬುರ್ಗಾ ಪಟ್ಟಣದ ಬೀರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಶುಕ್ರವಾರ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ, ರೇವಣಪ್ಪ ಹಿರೇಕುರುಬರ, ರಾಮಣ್ಣ ಸಾಲಭಾವಿ ಇದ್ದರು   

ಯಲಬುರ್ಗಾ: ಸ್ಥಳೀಯ ಬೀರಲಿಂಗೇಶ್ವರ ಜಾತ್ರೆ ಪ್ರಯುಕ್ತ ಶುಕ್ರವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳ್ಳಿ ಮೂರ್ತಿ ಉದ್ಘಾಟನೆ ಹಾಗೂ ನೂತನ ಮೂರ್ತಿಗಳ ಅನಾವರಣ ಕಾರ್ಯಕ್ರಮ ಜರುಗಿತು. ಪಲ್ಲಕ್ಕಿಯ ಬೆಳ್ಳಿ ಮೂರ್ತಿ ಅನಾವರಣ
ಗೊಳಿಸಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ,‘ವಿಶಿಷ್ಟ ಪರಂಪರೆಯೊಂದಿಗೆ ದೇಸಿ ಸಂಸ್ಕೃತಿಯನ್ನೂ ಪೊರೆಯುತ್ತಿರುವ ಹಾಲುಮತ ಸಮಾಜದ ಕೊಡುಗೆ ಸ್ಮರಣೀಯ’ ಎಂದರು.

ಬೀರಲಿಂಗೇಶ್ವರ ಹಾಗೂ ಕನಕದಾಸರ ಮೇಲಿನ ಸಮಾಜದ ಭಕ್ತಿ ಮಾದರಿ’ ಎಂದು ಅಭಿಪ್ರಾಯಪಟ್ಟರು.

ಸಮಾಜದ ಮುಖಂಡ ಪಟ್ಟಣ ಪಂಚಾಯಿತಿ ಸದಸ್ಯ ರೇವಣಪ್ಪ ಹಿರೇಕುರುಬರ, ಮಾಜಿ ಜಿ.ಪಂ ಸದಸ್ಯ ಕೆರಿಬಸಪ್ಪ ನಿಡಗುಂದಿ ಮಾತನಾಡಿದರು.

ADVERTISEMENT

ದೇವಸ್ಥಾನದಿಂದ ಹೊರಟ ಮೆರವಣಿಗೆಯು ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಸಂಚರಿಸಿ ನಂತರ ಪ್ರಮುಖ ಬೀದಿಯಲ್ಲಿ ಹಾದು ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ಮರಳಿತು. ಗಣ್ಯರಾದ ರೇವಣೆಪ್ಪ ನಿ. ಬಸವರಾಜ ಕುಡಗುಂಟಿ, ಉಮೇಶ ಜೋಗಿನ, ದೊಡ್ಡಯ್ಯ ಗುರುವಿನ, ನಾಗರಾಜ, ರಾಮಣ್ಣ ಸಾಲಭಾವಿ ಹಾಗೂ ಎಸ್.ಕೆ.ದಾನಕೈ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.