ADVERTISEMENT

ಭತವಂತನ ಸ್ಮರಿಸಿದರೆ ಸಂಸಾರ ಸಸಾರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 13:25 IST
Last Updated 9 ಸೆಪ್ಟೆಂಬರ್ 2020, 13:25 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಕಾಲಲ್ಲಿ ಕಟ್ಟಿದ ಗುಂಡು

ಕೊರಳಲ್ಲಿ ಕಟ್ಟಿದ ಬೆಂಡು

ತೇಲಲಿಯದು ಗುಂಡು

ADVERTISEMENT

ಮುಳಗಲೀಯದು ಬೆಂಡು

ಇಂತಪ್ಪ ಸಂಸಾರ ಶರಧಿಯ ದಾಂಟಿಸಿ

ಕಾಲಾಂತಕನೇ ಕಾಯೋ

ಕೂಡಲಸಂಗಮ ದೇವಾ...

ಸಂಸಾರ ಎಂಬುದು ತುಂಬಾ ಜಂಜಡದಿಂದ ಕೂಡಿದೆ. ನಾವು ಏನನ್ನು ಬಯಸುತ್ತೇವೆಯೋ ಅದು ಸಿಗುವುದಿಲ್ಲ. ಯಾವುದನ್ನು ಬಯಸುವುದಿಲ್ಲವೋ ಅದು ಸಿಗುತ್ತದೆ. ಉದಾಹರಣೆಗೆ ಕಬ್ಬಿಣದ ಗುಂಡು ತುಂಬಾ ಭಾರವಾಗಿರುತ್ತದೆ. ಅದನ್ನು ನಿರಿನಲ್ಲಿ ತೇಲಿಸಲಾಗುವುದಿಲ್ಲ. ಅದೇ ರೀತಿ ಬೆಂಡನ್ನು ಮುಳುಗಿಸಲು ಆಗುವುದಿಲ್ಲ. ಸಂಸಾರ ಕೂಡ ಸಂಕಷ್ಟಗಳಿಂದ ಕೂಡಿರುತ್ತದೆ. ಭಕ್ತಿಯಿಂದ ಭಗವಂತನನ್ನು ಸ್ಮರಿಸಿದರೆ ಅದು ಸಸಾರ (ಸರಳ)ವಾಗುತ್ತದೆ. ಭಗವಂತನೇ ಎಲ್ಲದಕ್ಕೂ ಕಾರಣೀಕರ್ತನು. ಆತನೇ ಈ ಭವಸಂಸಾರದಿಂದ ಸಂರಕ್ಷಣೆ ಮಾಡಬೇಕು ಎಂದು ಬಸವಣ್ಣ ತಿಳಿಸುತ್ತಾರೆ. ಅವರ ಆಶಯದಂತೆ ನಡೆದುಕೊಂಡರೆ ಜೀವನ ಸುಗಮವಾಗಿ ನಡೆಯುತ್ತದೆ. ದೇವರ ನಾಮ ಸ್ಮರಣೆಯನ್ನು ಬಿಡಬಾರದು.

(ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.