ADVERTISEMENT

ಜೂನ್-ಜುಲೈ ವೇಳೆಗೆ ಹೊಸ ಪಾಲಿಕೆಗಳ ರಚನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ದಾವಣಗೆರೆ: ಜನಗಣತಿಯ ಮಾಹಿತಿ ಆಧರಿಸಿ, ಮುಂಬರುವ ಜೂನ್-ಜುಲೈ ವೇಳೆಗೆ ರಾಜ್ಯದಲ್ಲಿ ನೂತನ ಪಾಲಿಕೆಗಳನ್ನು ರಚಿಸಲಾಗುವುದು ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.

ಹರಿಹರ ಸಮೀಪದ ಅಮರಾವತಿ ಕಾಲೊನಿಯಲ್ಲಿ ಶನಿವಾರ ಹರಿಹರ ನ್ಯಾಯಾಲಯಗಳ ಸಂಕೀರ್ಣ ಹಾಗೂ ನ್ಯಾಯಾಧೀಶರ ವಸತಿಗೃಹಗಳ ಶಂಕುಸ್ಥಾಪನಾ ಸಮಾರಂಭದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಜನಗಣತಿ ನಡೆಯುತ್ತಿದೆ. ಅಲ್ಲದೇ, ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಜಸನಂಖ್ಯೆ ಕುರಿತು ಇನ್ನೂ ಅಂಕಿ-ಅಂಶಗಳು ಅಂತಿಮವಾಗಿಲ್ಲ. ಹಾಗಾಗಿ, ಪುರಸಭೆ, ನಗರಸಭೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಹೊಸ ಪಾಲಿಕೆಗಳ ರಚನೆ ಜೂನ್-ಜುಲೈ ವೇಳೆಗೆ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.