ಮೈಸೂರು: ಸಿಎಟಿಟಿಎದ ಕೃಷ್ಣ ರಂಗನಾಥ್ ಮತ್ತು ಹೊರೈಜನ್ ಕ್ಲಬ್ನ ಅದಿತಿ ಎನ್. ನಂದಿ ಪಿರಿಯಾಪಟ್ಟಣದ ಗುಡ್ಡೇನಹಳ್ಳಿಯ ನಳಂದಾ ಗುರುಕುಲದಲ್ಲಿ, ಗುರುವಾರ ಆರಂಭವಾದ ರಾಜ್ಯ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಕೆಡೆಟ್ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದರು.
ಕೆಡೆಟ್ ಬಾಲಕರ ಫೈನಲ್ನಲ್ಲಿ ಕೃಷ್ಣ ರಂಗನಾಥ್ 11-3, 6-11, 11-9, 11-7ರಿಂದ ಬೆಂಗಳೂರಿನ ಹೊರೈಜನ್ ಕ್ಲಬ್ನ ಜಿ. ದಿಲೀಪ್ ವಿರುದ್ಧ ಜಯಿಸಿ ದರು. ನಾಲ್ಕರ ಘಟ್ಟದಲ್ಲಿ ಕೃಷ್ಣ ರಂಗನಾಥ್ 12-10, 11-5, 11-5ರಿಂದ ಮೊಹ್ಮದ್ ಫೈಜನ್ ವಿರುದ್ಧ; ಹೊರೈಜನ್ ಕ್ಲಬ್ನ ಜಿ. ದಿಲೀಪ್ 11-7, 11-5, 11-7ರಿಂದ ಜಿಮ್ಸ ವಿರುದ್ಧ ಆದಿತ್ಯಾ ತಂತ್ರಿ ವಿರುದ್ಧ ಜಯ ಗಳಿಸಿದರು.
ಕೆಡೆಟ್ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಹೊರೈಜನ್ ಕ್ಲಬ್ನ ಅದಿತಿ ಎನ್. ನಂದಿ 11-2, 11-4, 11-6ರಿಂದ ಸಿಸಿಎಟಿಟಿಎದ ಜೆ. ಶ್ವೇತಾ ವಿರುದ್ಧ ಗೆದ್ದರು.
ಸೆಮಿಫೈನಲ್ ಪಂದ್ಯಗಳಲ್ಲಿ ಅದಿತಿ ಎನ್. ನಂದಿ 11-9, 11-4, 11-7ರಿಂದ ಓಂ ಟಿಟಿಯ ಎಂ. ಅನರ್ಘ್ಯ ವಿರುದ್ಧ ಗೆದ್ದರು. ಸಿಸಿಎಟಿಟಿಎದ ಜೆ. ಶ್ವೇತಾ 11-8, 11-3, 3-11, 7-11, 14-12ರಿಂದ ತಮ್ಮದೇ ಕ್ಲಬ್ನ ಅದಿತಿ ಪಿ. ಜೋಶಿ ವಿರುದ್ಧ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.