ADVERTISEMENT

ದೇವದಾಸಿ ಪದ ಬಳಕೆ ನಿಷೇಧ: ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ರಾಯಚೂರು: `ದೇವದಾಸಿ~ ಎಂಬ ಪದ ಬಳಕೆಯೇ ಸರಿ ಅಲ್ಲ. ಈ ಪದ ಬಳಕೆ ಮಾಡಬಾರದು. ಇದಕ್ಕೆ ಪರ್ಯಾಯ ಪದವನ್ನು ಗುರುತಿಸಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಂಧೀಖಾನೆ ಖಾತೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವದಾಸಿ ಎಂಬ ಪದ ಬಳಕೆ ಸಮಾಜದ ಮಹಿಳೆಯರಿಗೆ ಗೌರವ ತರುವಂಥದ್ದಲ್ಲ. ಹೀಗಾಗಿ ಪದ ಬಳಕೆ ಮಾಡಬಾರದು ಎಂದು ಇಲಾಖೆ ನಿರ್ಧರಿಸಿದೆ ಎಂದರು.

ಸೂಚನೆ: ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ದೇವದಾಸಿ ಪುನರ್ವಸತಿ ಯೋಜನೆ, ದೇವದಾಸಿ ಮಹಿಳೆಯರು, ದೇವದಾಸಿ ಮಹಿಳೆಯರ ಸಂಘಟನೆ ಹೀಗೆ ಹಲವು ರೀತಿಯಲ್ಲಿ ದೇವದಾಸಿ ಪದ ಬಳಕೆ ಆಗುತ್ತಿದೆ. ಆ ಪದವನ್ನು ಬಳಕೆ ಮಾಡಬಾರದು ಎಂದು ಇಲಾಖೆ ನಿರ್ಧರಿಸಿದೆ. ಅಧಿಕಾರಿಗಳು ಗಮನಿಸಬೇಕು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.