ADVERTISEMENT

ದೇವದುರ್ಗ: 3 ಶವ ಕಳ್ಳತನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ದೇವದುರ್ಗ (ರಾಯಚೂರು ಜಿ.): ಪಟ್ಟಣದ ಪೊಲೀಸ್ ಠಾಣೆಯ ಪಕ್ಕದ ಮುಸ್ಲಿಂ ಸಮುದಾಯದ ಖಬರಸ್ಥಾನದಲ್ಲಿದ್ದ ಗೋರಿ ಅಗೆದು ಪುರುಷರ ಎರಡು ಮತ್ತು ಒಂದು ಶಿಶುವಿನ ಶವವನ್ನು ಸೋಮವಾರ ರಾತ್ರಿ ಕಳ್ಳತನ ಮಾಡಲಾಗಿದೆ. ಈ ಕುರಿತು ಮುಸ್ಲಿಂ ಒಕ್ಕೂಟ ಸಮಿತಿ ಪೊಲೀಸರಿಗೆ ದೂರು ಸಲ್ಲಿಸಿದೆ.

ಪಟ್ಟಣ ಪಾಶಾ ಶಹಪೂರಿ ಮೃತಪಟ್ಟ ಹಿನ್ನೆಲೆಯಲ್ಲಿ ಖಬರಸ್ಥಾನದಲ್ಲಿ ನೆಲ ಅಗೆಯುವುದಕ್ಕಾಗಿ ಸ್ಥಳ ಗುರುತಿಸಲು ಮಂಗಳವಾರ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಶಿವರಾತ್ರಿಯ ಹಬ್ಬದ ದಿನವಾದ ಸೋಮವಾರ ತಡರಾತ್ರಿ ಘಟನೆ ನಡೆದಿರುವುದಾಗಿ ಶಂಕಿಸಲಾಗಿದೆ. 15 ದಿನಗಳ ಹಿಂದೆ ಮೃತಟ್ಟಿದ್ದ ಹಸುಗೂಸಿನ ಗೋರಿ, ಎರಡು ವರ್ಷದ ಹಿಂದೆ ಮೃಪಟ್ಟಿದ್ದ ಜಹೀರುದ್ದೀನ್ ಅವರ ಗೋರಿ ಹಾಗೂ  ಮೂರು ವರ್ಷದ ಹಿಂದೆ ಮೃತಪಟ್ಟ ಪೊಲೀಸ್ ಖಾಜಾ ಮೈನುದ್ದೀನ್ ನಾಗುಂಡಿ ಅವರ ಗೋರಿಯನ್ನು ಅರೆಬರೆಯಾಗಿ ಅಗೆದು ಬಿಟ್ಟಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.