ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನ 2011-2012ನೇ ಸಾಲಿನಲ್ಲಿ 13.94ಕೋಟಿ ರೂ. ಆದಾಯವನ್ನು ಗಳಿಸಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ತಿಳಿಸಿದ್ದಾರೆ.
ವಿಶೇಷ ಸಫಾರಿ ಟ್ರಿಪ್: ಬನ್ನೇರುಘಟ್ಟ ಸಫಾರಿ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರಿಗೆ ಬುಧವಾರ (ಏ.04)ದಿಂದ ವಿಶೇಷ ಸಫಾರಿ ಟ್ರಿಪ್ ಆರಂಭಿಸಲಾಗಿದೆ.
ಸುವಿಹಾರಿ ಹವಾನಿಯಂತ್ರಿತ 20ಆಸನಗಳ ಹೊಸ ಬಸ್ ಕಾರ್ಯಾರಂಭ ಮಾಡಿದ್ದು ಪ್ರತಿ ಗಂಟೆಗೊಮ್ಮೆ ಈ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಟಿಕೆಟ್ ದರವನ್ನು ಒಬ್ಬರಿಗೆ 500ರೂನಂತೆ ನಿಗದಿಪಡಿಸಲಾಗಿದೆ. ಬೆಳಗ್ಗೆ 9.30ರಿಂದ 4.30ರವರೆಗೆ ಈ ಸೌಲಭ್ಯ ದೊರೆಯುತ್ತದೆ.
ಇದರ ಜೊತೆಗೆ ಜೀಪ್ ಸಫಾರಿಯನ್ನೂ ಪ್ರಾರಂಭಿಸಲಾಗಿದ್ದು ನಾಲ್ಕು ಮಂದಿ ವಯಸ್ಕರು ಹಾಗೂ ಇಬ್ಬರು ಮಕ್ಕಳು ಜೀಪ್ನಲ್ಲಿ ಸಫಾರಿ ವೀಕ್ಷಣೆ ಮಾಡಬಹುದಾಗಿದೆ. ಇದಕ್ಕೆ ತಾಸಿಗೆ 2500 ರೂ.ದರ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.