ADVERTISEMENT

ಬಲವಂತದ ಬಂದ್ ಆರೋಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಶಿಕಾರಿಪುರ: ಶಿಕಾರಿಪುರದಲ್ಲಿ ಬಲವಂತ ಬಂದ್ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನ ಹಿನ್ನೆಲೆಯಲ್ಲಿ ಜನರು ~ದಿನ ನಿಗದಿ ಮಾಡಿಕೊಂಡು ದುಃಖ ವ್ಯಕ್ತಪಡಿಸುವುದಿಲ್ಲ.~ ತಾಲ್ಲೂಕಿನ ಜನರು ನಿಜವಾಗಿ ಭ್ರಷ್ಟಾಚಾರದ ಪರವಾಗಿ ಇಲ್ಲ. ಸೋಮವಾರ ಬಂದ್ ಆಚರಿಸುವಂತೆ ಅಧಿಕಾರಿಗಳು, ಪೊಲೀಸರ ಮೂಲಕ ಜನರಿಗೆ ತಿಳಿಸಿ ಒತ್ತಾಯಪೂರ್ವಕ ಬಂದ್ ಆಚರಣೆ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಆರೋಪಿಸಿದರು. ತಾಲ್ಲೂಕಿನ ಜನರು ಸ್ವಯಂಪ್ರೇರಿತರಾಗಿ ಬಂದ್ ಮಾಡುವುದಾಗಿದ್ದರೆ ಶನಿವಾರ ಅಥವಾ ಭಾನುವಾರ ಮಾಡುತ್ತಿದ್ದರು. ಬಸ್, ಅಂಗಡಿ ಮಾಲೀಕರಿಗೆ ಬಿಜೆಪಿ ಮುಖಂಡರು, ಅಧಿಕಾರಿಗಳು ಒತ್ತಡದ ಮೂಲಕ ಬಂದ್ ಮಾಡುವಂತೆ ಹೇಳಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT