ಗಂಗಾವತಿ (ಕೊಪ್ಪಳ ಜಿ.): ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆಯಿಂದ ಮನನೊಂದ ಮಹಿಳೆಯೊಬ್ಬರು ಮಕ್ಕಳಿಬ್ಬರಿಗೆ ವಿಷ ಪ್ರಾಶನ ಮಾಡಿಸಿ, ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಹೆಬ್ಬಾಳದಲ್ಲಿ ನಡೆದಿದೆ.
ಮೃತಪಟ್ಟವರನ್ನು ಚಂದ್ರಕಲಾ (32) ಮಕ್ಕಳಾದ ಅಭಿಷೇಕ (8) ಮತ್ತು ಸಂಗೀತಾ (6) ಎಂದು ಗುರುತಿಸಲಾಗಿದೆ. ಚಂದ್ರಕಲಾ, ಅಭಿಷೇಕ ಶುಕ್ರವಾರವೇ ಮೃತಪಟ್ಟರೆ, ಚಿಕಿತ್ಸೆಗೆ ದಾಖಲಾಗಿದ್ದ ಸಂಗೀತಾ ಶನಿವಾರ ಕೊನೆಯುಸಿರೆಳೆದಳು.ತಂದೆಯ ಮರು ಮದುವೆ, ಕುಟುಂಬ ಪೋಷಣೆಗೆ ಮಲ ಸಹೋದರರ ಅಸಹಕಾರ, ಆರ್ಥಿಕ ಅಡಚಣೆಯಿಂದ ಸಂಸಾರ ನೀಗಿಸಲಾಗದೆ ಆಕೆ ಸಾವಿಗೆ ಶರಣಾಗಿದ್ದಾಳೆ ಎಂದು ದೂರು ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆಯ ಪ್ರಭಾರ ಪೊಲೀಸ್ ಇನ್ಸ್ಪೆಕ್ಟರ್ ಪವಾಡಶೆಟ್ಟಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.