ADVERTISEMENT

ರಾಷ್ಟ್ರೀಯ ನಾಟಕೋತ್ಸವಕ್ಕೆ ಮಕ್ಕಳ ರವೀಂದ್ರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 19:30 IST
Last Updated 15 ನವೆಂಬರ್ 2012, 19:30 IST

ಕಾರವಾರ: ರಾಷ್ಟ್ರೀಯ ನಾಟಕ ಶಾಲೆ ನಡೆಸುವ ~ಜಶ್ನೆ ಬಚಪನ್~ ರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕೆ ಉತ್ತರ ಕನ್ನಡ ಜಿಲ್ಲೆಯ ಚಿಂತನ ರಂಗ ಅಧ್ಯಯನ ಕೇಂದ್ರದ `ಮಕ್ಕಳ ರವೀಂದ್ರ~ ನಾಟಕ ಆಯ್ಕೆಯಾಗಿದೆ.

ಎನ್‌ಎಸ್‌ಡಿಯ ಅಭಿಮಂಚ್ ರಂಗ ಮಂದಿರದಲ್ಲಿ ಇದೇ 22ರಂದು ನಾಟಕದ ಪ್ರದರ್ಶನ ನಡೆಯಲಿದೆ.
ರವೀಂದ್ರನಾಥ ಟ್ಯಾಗೋರರ ಮಕ್ಕಳ ಕವಿತೆ, ಕತೆಗಳನ್ನಾಧರಿಸಿದ ಈ ನಾಟಕವನ್ನು ಕಿರಣ ಭಟ್ ಮತ್ತು ಡಾ. ಶ್ರಿಪಾದ ಭಟ್ ನಿರ್ದೇಶಿಸಿದ್ದಾರೆ.ಸುಧಾ ಆಡುಕಳ ನಾಟಕ ರಚಿಸಿದ್ದಾರೆ. ರಾಷ್ಟ್ರೀಯ ನಾಟಕೋತ್ಸವಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ನಾಟಕಗಳ ಪೈಕಿ ಇದೂ ಒಂದಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.